Select Your Language

Notifications

webdunia
webdunia
webdunia
webdunia

ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಸಂಸದ ಸಂಗಣ್ಣ

ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಸಂಸದ ಸಂಗಣ್ಣ
ರಾಯಚೂರು , ಭಾನುವಾರ, 5 ಜನವರಿ 2020 (11:38 IST)
ರಾಯಚೂರು : ಸಿಂಧನೂರಿನಲ್ಲಿರುವ ಬಾಂಗ್ಲಾ ವಲಸಿಗರಿಗೆ  ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಪತ್ರ ಬರೆದಿದ್ದಾರೆ.

ಭಾರತ- ಬಾಂಗ್ಲಾ ವಿಭಜನೆಯ ಬಳಿಕ ಭಾರತಕ್ಕೆ ಬಂದ ಬಾಂಗ್ಲಾ ನಿವಾಸಿಗಳಾದ ಸುಮಾರು 20ಸಾವಿರ ಜನ  ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿರುವ ಆರ್.ಎಚ್ ಕ್ಯಾಂಪ್ 1ರಿಂದ 5ರಲ್ಲಿ ವಾಸಿಸುತ್ತಿದ್ದಾರೆ. ಇವರು ಪೌರತ್ವ  ತಿದ್ದುಪಡಿ ಕಾಯ್ದೆಯಿಂದ ಭಾತರದ ಪೌರತ್ವ ಪಡೆಯಲಿದ್ದಾರೆ.

 


 

ಈ ಹಿನ್ನಲೆಯಲ್ಲಿ ನಳೀನ್ ಕುಮಾರ್ ಕಟೀಲ್ ಗೆ ಪತ್ರ ಬರೆದ ಸಂಸದ ಸಂಗಣ್ಣ ಕರಡಿ, ಬಾಂಗ್ಲಾ ವಲಸಿಗರಿಗೆ  ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭ 15 ಜನವರಿ 2020ರೊಳಗೆ ನಡೆಸಬೇಕು. ಪ್ರಧಾನಿ ಮೋದಿ ಮತ್ತ್ತು ಅಮಿತ್ ಶಾ ದಿನಾಂಕ ನಿಗದಿ ಪಡಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ವಿರುದ್ಧ ತೊಗರಿ ಬೆಳೆಗಾರರ ಆಕ್ರೋಶ