Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯರವರ ಹೇಳಿಕೆಗೆ ಟ್ವೀಟರ್ ಮೂಲಕ ತಿರುಗೇಟು ನೀಡಿದ ಸದಾನಂದ ಗೌಡ

ಸಿದ್ದರಾಮಯ್ಯರವರ ಹೇಳಿಕೆಗೆ ಟ್ವೀಟರ್ ಮೂಲಕ ತಿರುಗೇಟು ನೀಡಿದ ಸದಾನಂದ ಗೌಡ
ಬೆಂಗಳೂರು , ಶನಿವಾರ, 31 ಮಾರ್ಚ್ 2018 (11:30 IST)
ಬೆಂಗಳೂರು : ಅಮಿತ್ ಶಾ ಅವರು ನನ್ನ ಕಂಡರೆ ಹೆದರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಇದೀಗ ಸದಾನಂದ ಗೌಡರು ಟ್ವೀಟರ್ ಮೂಲಕ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸದಾನಂದ ಗೌಡರು,’ ನೀವು ದುರಾಡಳಿತ ಭೃಷ್ಟಾಚಾರ, ಹಿಂದೂ ಹತ್ಯೆ ಅಧಿಕಾರಿಗಳ ಆತ್ಮಹತ್ಯೆಯ ನೆರಳು ಕಂಡು ನೀವು ಬೆಚ್ಚಿ ಹೆದರಿಕೊಂಡಿರಬೇಕು. ನಿಮ್ಮನ್ನು ಕಂಡು ಬೆದರಲು ನಿಮ್ಮನ್ನು ಹಿಂಬಾಲಿಸಲು ನೀವೇನು ಘನಂದಾರಿ ಕೆಲಸ ಮಾಡಿದೀರಿ? ಎಂದು ಪ್ರಶ್ನಿಸಿದ್ದಾರೆ.

 

ಹಾಗೇ ಅಮಿತ್ ಶಾ ಅವರು ಹಿಂದುವೋ, ಜೈನರೋ ಎಂದು ಸ್ಪಷ್ಟಪಡಿಸಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸದಾನಂದ ಗೌಡರು ,’ ಸಿದ್ದರಾಮಯ್ಯನವರೇ ನೀವು ಹಿಂದೂವಾದರೂ  ಕಳೆದೈದು ವರ್ಷದಲ್ಲಿ ನಿಮ್ಮೆಲ್ಲ ನಡವಳಿಕೆಗಳು ಹಿಂದೂ ವಿರೋಧಿಯಾಗಿದ್ದವು. ಅವರ ಹಿಂದೂ ದೇವರ ಮೇಲಿನ ನಂಬಿಕೆ, ಆಚರಣೆಯ ಬಗ್ಗೆ ಒಡಕು ಹುಟ್ಟಿಸುವ ನಿಮ್ಮ ಪ್ರಯತ್ನ ವ್ಯರ್ಥ’ ಎಂದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಸ್ಟೀವ್ ಸ್ಮಿತ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬರಲಿದ್ದಾನೆ ಈ ಕ್ರಿಕೆಟಿಗ