Publish Date: Wed, 05 Apr 2023 (14:03 IST)
Updated Date: Wed, 05 Apr 2023 (08:39 IST)
ರಾಜಕೀಯ ನಾಯಕರ ಭಾವಚಿತ್ರ ಹಾಗೂ ಪಕ್ಷಗಳ ಚಿಹ್ನೆ ಹೊಂದಿರುವ ಆಟೋ ಗಳ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದಾರೆ.ಮೆಜೆಸ್ಟಿಕ್ ಬಳಿಯ KSR ರೈಲ್ವೆ ನಿಲ್ದಾಣದ ಬಳಿ RTO ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.RTO ಜಂಟಿ ನಿರ್ದೇಶಕ ಹಾಲಪ್ಪ, ರಾಜಾಜಿನಗರ RTO ಅಧಿಕಾರಿ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಆಟೋಗಳ ಪರಿಶೀಲನೆ ಮಾಡಲಾಗಿದೆ.ಆಟೋಗಳ ಮೇಲೆ ರಾಜಕೀಯ ಪ್ರೇರಿತ ಭಾವಚಿತ್ರ ಅಥವಾ ಚಿಹ್ನೆ ಇದ್ದರೆ 2 ರಿಂದ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತೆ.ಚುನಾವಣಾ ಆಯೋಗದ ಸೂಚನೆಯಂತೆ RTO ಅಧಿಕಾರಿಗಳು ಕಟ್ಟೆಚರವಹಿಸಿದ್ದಾರೆ.ರಾಜಕೀಯ ನಾಯಕರು ಆಟೋಗಳ ಮೇಲೆ ಭಾವಚಿತ್ರ ಅಂಟಿಸಿ ಭಾರೀ ಪ್ರಚಾರ ಪಡೆಯುತ್ತಿದ್ದಾರೆ.ಹೀಗಾಗಿ ಇದನ್ನು ತಡೆಗಟ್ಟಲು RTO ಅಧಿಕಾರಿಗಳು ಕಾರ್ಯಚರಣೆನಡೆಸಿದ್ದಾರೆ