Select Your Language

Notifications

webdunia
webdunia
webdunia
webdunia

ಸಿನಿಮಾ ನಟನಿಂದ ಪ್ರಜ್ಞೆ ತಪ್ಪಿಸಿ ಯುವತಿ ಮೇಲೆ ಅತ್ಯಾಚಾರ

ಸಿನಿಮಾ ನಟನಿಂದ ಪ್ರಜ್ಞೆ ತಪ್ಪಿಸಿ ಯುವತಿ ಮೇಲೆ ಅತ್ಯಾಚಾರ
ಚೆನ್ನೈ , ಶನಿವಾರ, 7 ಮಾರ್ಚ್ 2020 (20:40 IST)
ಯುವತಿಯೊಬ್ಬಳನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರೋ ಆರೋಪದ ಮೇಲೆ ಹಿರಿಯ ಚಿತ್ರನಟನ ಪುತ್ರನಾಗಿರುವ ನಟನೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಎಐಎಡಿಎಂಕೆ ಸ್ಪೀಕರ್ ಆಗಿರುವ ಚಿತ್ರನಟ ಸೂರ್ಯಕಾಂತ್ ಅವರ ಪುತ್ರ ವಿಜಯ್ ಹರೀಶ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಹಳೇ ಪರಿಚಿತಳಾಗಿದ್ದ ಯುವತಿಯನ್ನು ಅಪಾರ್ಟ್ ಮೆಂಟ್ ಗೆ ಕರೆಸಿಕೊಂಡು ಆಕೆಗೆ ಮತ್ತೇರಿಸುವ ಔಷಧ ಬೆರೆಸಿದ ಜ್ಯೂಸ್ ಕುಡಿಸಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದಾನೆ.

ಅತ್ಯಾಚಾರ ನಡೆಸಿದ್ದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಯಾರಿಗಾದರೂ ಅತ್ಯಾಚಾರದ ಬಗ್ಗೆ ಹೇಳಿದರೆ ವಿಡಿಯೋ ವೈರಲ್ ಮಾಡೋದಾಗಿ ಹೆದರಿಸಿದ್ದನಂತೆ.

ಹೀಗಂತ ಸಂತ್ರಸ್ತೆ ಕೇಸ್ ದಾಖಲಿಸಿದ್ದು, ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬ್ಯೂಟಿ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ; ಸಿಕ್ಕಿಬಿದ್ದ ಹುಡುಗಿಯರ ರೇಟ್ ಎಷ್ಟು?