Select Your Language

Notifications

webdunia
webdunia
webdunia
webdunia

ಪಾದರಾಯನಪುರದಲ್ಲಿ ಪೊಲೀಸರೊಂದಿಗೆ ಮತ್ತೆ ಗಲಾಟೆ, ಕಿರಿಕ್

ಪಾದರಾಯನಪುರದಲ್ಲಿ ಪೊಲೀಸರೊಂದಿಗೆ ಮತ್ತೆ ಗಲಾಟೆ, ಕಿರಿಕ್
ಬೆಂಗಳೂರು , ಮಂಗಳವಾರ, 21 ಏಪ್ರಿಲ್ 2020 (14:58 IST)
ಕೋವಿಡ್ -19 ನಿಯಂತ್ರಣಕ್ಕಾಗಿ ಮುಂದಾಗಿರುವ ವೇಳೆ ಕೊರೊನಾ ವಾರಿಯರ್ಸ್, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪಾದರಾಯನಪುರದಲ್ಲಿ ಮತ್ತೆ ಗಲಾಟೆಗಳ ಸದ್ದು ಕೇಳಿಬರುತ್ತಿದೆ.

ಘಟನೆ ಸಂಬಂಧ 5 ಕೇಸ್ ಗಳನ್ನು ದಾಖಲು ಮಾಡಿಕೊಂಡಿರುವ ಸರಕಾರ ಐವತ್ತಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧನ ಮಾಡಿ, ಕಟ್ಟೆಚ್ಚರಕ್ಕೆ ಸೂಚನೆ ಕೊಟ್ಟಿದೆ.

ಆದರೆ ಪಾದರಾಯನಪುರದ ನಿವಾಸಿಗಳು ಕೆಲವರು ಕುಂಟು ನೆಪಗಳನ್ನು ಮಾಡುತ್ತಾ ಬೈಕ್ ಗಳಲ್ಲಿ ಎರಡ್ಮೂರು ಜನರು ಸಂಚಾರಕ್ಕೆ ಮುಂದಾಗುತ್ತಿದ್ದಾರೆ.

ಕೆಲವರು ಪೊಲೀಸರೊಂದಿಗೆ ತೀವ್ರ ವಾಗ್ವದ ನಡೆಸಿದ್ದಾರೆ. ವ್ಯಕ್ತಿಯೊಬ್ಬ ಆಸ್ಪತ್ರೆಯ ಹಳೆಯ ಬಿಲ್ ತೋರಿಸಿ ಆಸ್ಪತ್ರೆಗೆ ಹೋಗಬೇಕಿದೆ ಅಂತ ಗಲಾಟೆ ಮಾಡೋಕೆ ಶುರುಮಾಡಿದ್ದ. ಆದರೆ ಪೊಲೀಸರು ಪರಿಶೀಲನೆ ಮಾಡಿದಾಗ ಅದು ತುಂಬಾ ಹಳೆಯ ಬಿಲ್ ಎಂಬುದು ಗೊತ್ತಾಯಿತು.

ಇದರಿಂದ ವ್ಯಕ್ತಿಗೆ ಮರಳಿ ಹೋಗುವಂತೆ ಸೂಚಿಸಿದರು. ಕೆಲಹೊತ್ತು ಆತ ವಾಗ್ವಾದ ನಡೆಸಿದ. ಇಷ್ಟೇ ಅಲ್ಲ, ಇನ್ನೂ ಕೆಲವು ಜನರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ಚಿತ್ರಗಳನ್ನು ಕಂಡು ಬರುತ್ತಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಜಮೀರ್ ಅಹಮ್ಮದ್ ಗೆ ಕ್ವಾರಂಟೈನ್ ಫಿಕ್ಸ್