Select Your Language

Notifications

webdunia
webdunia
webdunia
webdunia

ಪಾದರಾಯನಪುರ ಕೇಸ್ : ಬಾಲ ಕಟ್ ಮಾಡಿ ಬುದ್ಧಿ ಕಲಿಸ್ತೇವೆ ಎಂದ ಸಚಿವ

ಪಾದರಾಯನಪುರ ಕೇಸ್ : ಬಾಲ ಕಟ್ ಮಾಡಿ ಬುದ್ಧಿ ಕಲಿಸ್ತೇವೆ ಎಂದ ಸಚಿವ
ಬೆಂಗಳೂರು , ಸೋಮವಾರ, 20 ಏಪ್ರಿಲ್ 2020 (19:12 IST)
ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್, ಕೊರೊನಾ ವಾರಿಯರ್ಸ್ ಗಳ ಮೇಲೆ ನಡೆದ ಹಲ್ಲೆ ಘಟನೆಗೆ ಸರಕಾರ ಗರಂ ಆಗಿದ್ದು, ಪುಡಿ ರೌಡಿಗಳ ಬಾಲ ಕಟ್ ಮಾಡ್ತೇವೆ ಅಂತ ಸಚಿವರೊಬ್ಬರು ತೊಡೆತಟ್ಟಿದ್ದಾರೆ.

ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆ ಹಾಗೂ ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪಿನ ಬಾಲ ಕಟ್ ಮಾಡ್ತೇವೆ. ಬಾಯಲ್ಲಿ ಹೇಳಿದ್ರೆ ಕೇಳೋದಿಲ್ಲ. ಇನ್ನೇನಿದ್ರೂ ದಂಡಂ ದಶಗುಣಂ ಅಂತ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಗಲಭೆಯಲ್ಲಿ ಪಾಲ್ಗೊಂಡವರ ಬಾಲ ಕಟ್ ಮಾಡ್ತೇವೆ. ಮುಂದೆ ಬಾಲ ಬಿಚ್ಚೋರಿಗೂ ಸರಕಾರ ಬುದ್ಧಿ ಕಲಿಸುತ್ತೆ ಅಂತ ಹೇಳಿದ್ದಾರೆ.
ಪದೇ ಪದೇ ಗಲಭೆಗಳು, ಆಶಾ-ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಯುತ್ತಿರುವುದು ಸರಿಯಲ್ಲ ಅಂತ ಸಚಿವ ಸಿ.ಟಿ.ರವಿ ಖಂಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಶಾಸಕನ ಬೆವರಿಳಿಸಿದ ಸಿಎಂ ಯಡಿಯೂರಪ್ಪ