Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಶಾಸಕನ ಬೆವರಿಳಿಸಿದ ಸಿಎಂ ಯಡಿಯೂರಪ್ಪ

ಕಾಂಗ್ರೆಸ್ ಶಾಸಕನ ಬೆವರಿಳಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು , ಸೋಮವಾರ, 20 ಏಪ್ರಿಲ್ 2020 (15:51 IST)
ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಸಿಎಂ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ.

ಪಾದರಾಯನಪುರ ಗಲಭೆ ನನಗೆ ಹೇಳದೇ ಹೋಗಿದ್ದಕ್ಕೆ ಆಗಿದ್ದು ಅಂತ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಜಮೀರ್ ಅಹ್ಮದ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
webdunia

ಸರಕಾರ ತನ್ನ ಕೆಲಸವನ್ನು ಮಾಡುತ್ತದೆ. ಎಲ್ಲಿ ಹೋಗಬೇಕು ಏನು ಮಾಡಬೇಕು ಅನ್ನೋದು ಸರಕಾರಕ್ಕೆ ಗೊತ್ತಿದೆ. ಇದನ್ನೆಲ್ಲಾ ಕೇಳೋಕೆ ಜಮೀರ್ ಯಾರು? ಎಂದು ಸಿಎಂ ಕಿಡಿಕಾರಿದ್ದಾರೆ.

ಜಮೀರ್ ವರ್ತನೆ ನೋಡಿದ್ರೆ ಗಲಭೆಗೆ ಅವರೇ ಕುಮ್ಮಕ್ಕು ನೀಡಿದ್ದಾರೆ ಅಂತ ತಿಳಿದುಕೊಳ್ಳಬೇಕಾ? ಜನಪ್ರತಿನಿಧಿಯೇ ಈ ಥರ ಹೇಳಿಕೆ ಕೊಡೋದು ಸರಿಯಲ್ಲ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಕರ್ನಾಟಕ ಫುಲ್ ಲಾಕ್ ಡೌನ್