Publish Date: Wed, 07 Jul 2021 (13:44 IST)
Updated Date: Wed, 07 Jul 2021 (13:46 IST)
ಕೇಂದ್ರ ಸಂಪುಟ ಪುನರಚನೆ ಬೆನ್ನಲ್ಲೇ ಮಾನ ಸಂಪನ್ಮೂಲ ಸಚಿವ ಸ್ಥಾನಕ್ಕೆ ಸರಬಾನಂದ ಸೋನುವಾಲ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮೊದಲ ವಿಕೆಟ್ ಪತನಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರಚನೆ ಇಂದು ಸಂಜೆ 6 ಗಂಟೆಗೆ ನಡೆಯಲಿದ್ದು, ಇದರ ಬೆನ್ನಲ್ಲೇ ಅನಾರೋಗ್ಯದ ಕಾರಣವೊಡ್ಡಿ ಸರಬಾನಂದ ಸೋನುವಾಲ್ ಶಿಕ್ಷಣ ಖಾತೆಗೆ ರಾಜೀನಾಮೆ ನೀಡಿರುವುದು ಕೂತಹಲ ಮೂಡಿಸಿದೆ.
ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ನಾರಾಯಣ್ ರಾಣೆ ಕೇಂದ್ರ ಸಚಿವ ಅಲಂಕರಿಸಲು ಮೊದಲ ಸಾಲಿನಲ್ಲಿದ್ದಾರೆ. ಇದೇ ವೇಳೆ ಮತ್ತಷ್ಟು ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.