Publish Date: Tue, 06 Jul 2021 (21:21 IST)
Updated Date: Tue, 06 Jul 2021 (21:22 IST)
ಬಿಎಂಟಿಸಿಯ ಎಂಡಿಯಾಗಿದ್ದ ಶಿಖಾರವರನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ .ಇಂದು ಸಂಜೆ ಇವರ ಸ್ಥಾನಕ್ಕೆ ಡಾ ರೇಜುರವರನ್ನು ನೇಮಕ ಮಾಡಲಾಗಿದೆ. ವಾಣಿಜ್ಯ ತೆರೆಗೆ ಇಲಾಖೆಯ ಆಯುಕ್ತರಾಗಿ ಶಿಖಾ ವರ್ಗಾವಣೆ ಆಗಿದ್ದಾರೆ.ಕಳೆದ ವಾರ ಶಿಖಾರವರನ್ನು ವರ್ಗಾವಣೆ ಮಾಡಲಾಗಿತ್ತು. ಒಂದು ಗಂಟೆ ಒಳಗೆ ಆದೇಶವನ್ನು ರದ್ದು ಪಡಿಸಿತ್ತು .ಸರ್ಕಾರ ಮತ್ತೆ ಅದೇ ಸ್ಥಳಕ್ಕೆ ಅವರನ್ನು ನಿಯೋಜನೆ ಮಾಡಲಾಗಿದೆ .ಕೋವಿಡ್ ಸಂಕಷ್ಟದ ಕಾಲದಲ್ಲಿ ಜೆಎಸ್ಟಿ ಸಂಗ್ರಹ ಕಡಿಮೆಯಾದ ಹಿನ್ನೆಲೆಯಲ್ಲಿ ಸರ್ಕಾರ ಶಿಖಾರನ್ನು ವರ್ಗಾವಣೆ ಮಾಡಿ ಜೆಎಸ್ಟಿ ನಷ್ಟವನ್ನು ಸರಿ ತೂಗಿಸುವ ಉದ್ದೇಶದಿಂದ ಶಿಖಾರವರನ್ನು ನೇಮಕ ಮಾಡಿಲಾಗಿದೆ ಎಂದು ತಿಳಿದು ಬಂದಿದೆ. ಇಂದು ಮತ್ತೊಂದು ಬೆಳವಣಿಗೆಯಲ್ಲಿ ಡಾ. ಅಮಿತ್ ಪ್ರಸಾದ್ ಹಿರಿಯ ಐಎಎಸ್ ಅಧಿಕಾರಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಉದ್ದೇ ನೀಡಲಾಗಿದೆ.