Publish Date: Tue, 21 Mar 2023 (18:22 IST)
Updated Date: Tue, 21 Mar 2023 (18:16 IST)
ತಮ್ಮ ಪಕ್ಷದಲ್ಲಿ ಒಗ್ಗಟ್ಟಿದೆ.. ನಾವೆಲ್ಲರೂ ಒಂದೇ ಎಂದು ಹೇಳಿಕೊಂಡು ಓಡಾಡುವ ರಾಜಕೀಯ ಪಕ್ಷದ ನಾಯಕರು ಚುನಾವಣೆ ಹತ್ತಿರ ಬಂದಾಗ ನನಗೆ ಟಿಕೆಟ್, ನನಗೆ ಟಿಕೆಟ್ ಎಂದು ಸ್ವಪಕ್ಷದಲ್ಲೇ ಕಚ್ಚಾಡಿಕೊಳ್ತಾರೆ. ಇದೀಗ ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದಲ್ಲಿ ಸ್ಥಳೀಯ BJP ಮುಖಂಡರು ಸ್ಥಳೀಯರಿಗೆ BJP ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಹಾಲಿ BJP ಶಾಸಕ ಸಿದ್ದು ಸವದಿ ವಿರುದ್ದ ತೇರದಾಳ ಸ್ಥಳೀಯ BJP ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ..ತೇರದಾಳ ಮತಕ್ಷೇತ್ರದ ಅಸಮಾಧಾನಿತ BJP ಮುಖಂಡ, ಟಿಕೆಟ್ ಆಕಾಂಕ್ಷಿ ಕಿರಣ್ ಕುಮಾರ್ ವರಿಷ್ಠರ ಮುಂದೆ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.. ಕಳೆದೆರಡು ವಿಧಾನಸಭಾ ಚುನಾವಣೆಗಳಿಂದಲೂ ಪಕ್ಷದ ವರಿಷ್ಠರ ಮುಂದೆ ಸ್ಥಳೀಯರು ಈ ಬೇಡಿಕೆ ಇಟ್ಟುಕೊಂಡೇ ಬಂದಿದ್ದಾರೆ.. ಮತಕ್ಷೇತ್ರದ ಸ್ಥಳೀಯ BJP ನಾಯಕರೆಲ್ಲ ಒಗ್ಗಟ್ಟಿನಿಂದ ಚುನಾವಣೆ ಮಾಡ್ತೇವೆ ಎಂದು ಅಸಮಾಧಾನಿತ BJP ಮುಖಂಡರು ಪಟ್ಟು ಹಿಡಿದಿದ್ದಾರೆ.