ದರ್ಶನ್ ಆಂಡ್ ಗ್ಯಾಂಗ್ ಪೈಕಿ ನಾಲ್ವರಿಗೆ ಮಾತ್ರ ಲಾಯರ್ ಗಳು, ಉಳಿದವರ ಕತೆ ಗೋವಿಂದ

Krishnaveni K
ಶನಿವಾರ, 22 ಜೂನ್ 2024 (12:06 IST)
ಬೆಂಗಳೂರು: ಡಿ ಬಾಸ್ ಎಂದು ನಂಬಿ ಹಿಂದೆ ಹೋದ ಉಳಿದ ಆರೋಪಿಗಳು ಈಗ ಅಕ್ಷರಶಃ ಲಾಕ್ ಆಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಭಾವಿಗಳು ಹೇಗೋ ಲಾಯರ್ ನೇಮಿಸಿಕೊಂಡು ವಾದ ಮಾಡುತ್ತಿದ್ದಾರೆ. ಆದರೆ ಉಳಿದವರ ಕತೆ ಗೋವಿಂದ.

ಆರೋಪಿ ಪಟ್ಟಿಯಲ್ಲಿರುವ ಕೆಲವರಿಗೆ ನೇರವಾಗಿ ದರ್ಶನ್ ಜೊತೆ ಸಂಪರ್ಕವೇ ಇಲ್ಲ. ಆದರೆ ಇವರೆಲ್ಲರೂ ಈಗ ಡಿ ಬಾಸ್ ನೋಡುವ ಆಸೆಗೆ ಬಿದ್ದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೈ ಜೋಡಿಸಿ ಲಾಕ್ ಆಗಿದ್ದಾರೆ. ಈ ಕೇಸ್ ನಲ್ಲಿ ದರ್ಶನ್, ಪವಿತ್ರಾ ಗೌಡ, ರವಿ ಸೇರಿದಂತೆ ನಾಲ್ವರು ಆರೋಪಿಗಳ ಪರ ವಾದ ಮಂಡಿಸಲು ಪ್ರತ್ಯೇಕ ಲಾಯರ್ ನೇಮಿಸಲಾಗಿದೆ. ಆದರೆ ಉಳಿದ ಕೆಲವು ಆರೋಪಿಗಳು ತೀರಾ ಬಡತನದಲ್ಲಿದ್ದಾರೆ.

ಈ ಆರೋಪಿಗಳ ಆದಾಯವನ್ನೇ ನಂಬಿ ಕುಟುಂಬ ನಡೆಯುತ್ತಿತ್ತು. ಈಗ ಆರೋಪಿಗಳಾಗಿರುವುದರಿಂದ ಇವರ ಪರವಾಗಿ ನಿಲ್ಲಲು ಯಾರೂ ಇಲ್ಲ. ಲಾಯರ್ ನೇಮಿಸಲೂ ಹಣವಿಲ್ಲ ಎಂಬ ಪರಿಸ್ಥಿತಿಯಾಗಿದೆ. ದರ್ಶನ್ ಮೇಲಿನ ಅಭಿಮಾನ ಎಂದುಕೊಂಡು ಹಿಂದೆ ಹೋದ ಬಡಪಾಯಿಗಳ ಪಾಡು ಕೇಳುವವರೇ ಇಲ್ಲ ಎಂದಾಗಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ನಂದೀಶ್ ಕುಟುಂಬ ಮಾಧ್ಯಮಗಳ ಮುಂದೆ ತಮ್ಮ ದುಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಮಗೆ ಲಾಯರ್ ನೇಮಿಸಬೇಕೆಂದರೆ ಯಾರಾದರೂ ಸಹಾಯ ಮಾಡಬೇಕು. ನಮ್ಮ ಕುಟುಂಬ ಅವನ ದುಡಿಮೆಯಿಂದಲೇ ನಡೆಯುತ್ತಿತ್ತು ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಅಭಿಮಾನ ಎಂದು ಮಾಡಬಾರದ ಕೆಲಸಕ್ಕೆ ಕೈ ಜೋಡಿಸಲು ಹೋಗಿ ಈಗ ಈ ಬಡಪಾಯಿಗಳ ಸ್ಥಿತಿ ಕೇಳುವವರೇ ಇಲ್ಲ ಎಂಬಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಮತ್ತೆ ತೆರೆದ ಲಾಲ್ ಕ್ವಿಲಾ ಮೆಟ್ಟೋ ನಿಲ್ದಾಣ

ಬಿಹಾರ ಮಹಾಘಟಬಂಧನ್‌ಗೆ ಹೀನಾಯ ಸೋಲು, ಲಾಲು ಕುಟುಂಬದಲ್ಲಿ ಭಾರೀ ಬೆಳವಣಿಗೆ

ಶಬರಿಮಲೆ ಯಾತ್ರೆ ಶುರು, ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಬಿಹಾರ ಫಲಿತಾಂಶ ಬೆನ್ನಲ್ಲೇ ರಾಹುಲ್ ಗಾಂಧಿಯನ್ನು ಭೇಟಿಯಾದ ಸಿದ್ದರಾಮಯ್ಯ

ಕೇಳಿದಾಗ ಮೊಬೈಲ್ ಕೊಡಿಸಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಮುಂದಿನ ಸುದ್ದಿ
Show comments