Webdunia - Bharat's app for daily news and videos

Install App

ದರ್ಶನ್ ಆಂಡ್ ಗ್ಯಾಂಗ್ ಪೈಕಿ ನಾಲ್ವರಿಗೆ ಮಾತ್ರ ಲಾಯರ್ ಗಳು, ಉಳಿದವರ ಕತೆ ಗೋವಿಂದ

Krishnaveni K
ಶನಿವಾರ, 22 ಜೂನ್ 2024 (12:06 IST)
ಬೆಂಗಳೂರು: ಡಿ ಬಾಸ್ ಎಂದು ನಂಬಿ ಹಿಂದೆ ಹೋದ ಉಳಿದ ಆರೋಪಿಗಳು ಈಗ ಅಕ್ಷರಶಃ ಲಾಕ್ ಆಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಭಾವಿಗಳು ಹೇಗೋ ಲಾಯರ್ ನೇಮಿಸಿಕೊಂಡು ವಾದ ಮಾಡುತ್ತಿದ್ದಾರೆ. ಆದರೆ ಉಳಿದವರ ಕತೆ ಗೋವಿಂದ.

ಆರೋಪಿ ಪಟ್ಟಿಯಲ್ಲಿರುವ ಕೆಲವರಿಗೆ ನೇರವಾಗಿ ದರ್ಶನ್ ಜೊತೆ ಸಂಪರ್ಕವೇ ಇಲ್ಲ. ಆದರೆ ಇವರೆಲ್ಲರೂ ಈಗ ಡಿ ಬಾಸ್ ನೋಡುವ ಆಸೆಗೆ ಬಿದ್ದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೈ ಜೋಡಿಸಿ ಲಾಕ್ ಆಗಿದ್ದಾರೆ. ಈ ಕೇಸ್ ನಲ್ಲಿ ದರ್ಶನ್, ಪವಿತ್ರಾ ಗೌಡ, ರವಿ ಸೇರಿದಂತೆ ನಾಲ್ವರು ಆರೋಪಿಗಳ ಪರ ವಾದ ಮಂಡಿಸಲು ಪ್ರತ್ಯೇಕ ಲಾಯರ್ ನೇಮಿಸಲಾಗಿದೆ. ಆದರೆ ಉಳಿದ ಕೆಲವು ಆರೋಪಿಗಳು ತೀರಾ ಬಡತನದಲ್ಲಿದ್ದಾರೆ.

ಈ ಆರೋಪಿಗಳ ಆದಾಯವನ್ನೇ ನಂಬಿ ಕುಟುಂಬ ನಡೆಯುತ್ತಿತ್ತು. ಈಗ ಆರೋಪಿಗಳಾಗಿರುವುದರಿಂದ ಇವರ ಪರವಾಗಿ ನಿಲ್ಲಲು ಯಾರೂ ಇಲ್ಲ. ಲಾಯರ್ ನೇಮಿಸಲೂ ಹಣವಿಲ್ಲ ಎಂಬ ಪರಿಸ್ಥಿತಿಯಾಗಿದೆ. ದರ್ಶನ್ ಮೇಲಿನ ಅಭಿಮಾನ ಎಂದುಕೊಂಡು ಹಿಂದೆ ಹೋದ ಬಡಪಾಯಿಗಳ ಪಾಡು ಕೇಳುವವರೇ ಇಲ್ಲ ಎಂದಾಗಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ನಂದೀಶ್ ಕುಟುಂಬ ಮಾಧ್ಯಮಗಳ ಮುಂದೆ ತಮ್ಮ ದುಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಮಗೆ ಲಾಯರ್ ನೇಮಿಸಬೇಕೆಂದರೆ ಯಾರಾದರೂ ಸಹಾಯ ಮಾಡಬೇಕು. ನಮ್ಮ ಕುಟುಂಬ ಅವನ ದುಡಿಮೆಯಿಂದಲೇ ನಡೆಯುತ್ತಿತ್ತು ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಅಭಿಮಾನ ಎಂದು ಮಾಡಬಾರದ ಕೆಲಸಕ್ಕೆ ಕೈ ಜೋಡಿಸಲು ಹೋಗಿ ಈಗ ಈ ಬಡಪಾಯಿಗಳ ಸ್ಥಿತಿ ಕೇಳುವವರೇ ಇಲ್ಲ ಎಂಬಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟಕ್ಕೆ ತೆರಳುವ ಯೋಜನೆ ಹಾಕಿಕೊಂಡಿರುವವರು ಈ ಸುದ್ದಿ ಓದಲೇ ಬೇಕು

DK Shivakumar: ಆರ್ ಸಿಬಿ ಟೀಂ ಖರೀದಿ ಮಾಡಕ್ಕೆ ನಂಗೇನು ಹುಚ್ಚಾ video

Bengaluru Stampede: ದೇಶದಲ್ಲಿ ನಡೆದ ದುರಂತಕ್ಕೆಲ್ಲ ಸಿಎಂ, ಪ್ರಧಾನಿ ರಾಜೀನಾಮೆ ನೀಡಿದ್ದಾರಾ: ಸಿಎಂ ಸಿದ್ದರಾಮಯ್ಯ

ಸಿಎಂ ರಾಜೀನಾಮೆ ಬದಲು ಜಾತಿಗಣತಿ, ಇದು ಹೈಕಮಾಂಡ್ ಪ್ಲ್ಯಾನ್: ಛಲವಾದಿ ನಾರಾಯಣಸ್ವಾಮಿ

Siddaramaiah: ರಾಜ್ಯಪಾಲರನ್ನು ಫೋನ್ ನಲ್ಲಿ ನಾನೇ ಕರೆದಿದ್ದೆ: ಗೊತ್ತಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಸ್ಪಷ್ಟನೆ

ಮುಂದಿನ ಸುದ್ದಿ
Show comments