Select Your Language

Notifications

webdunia
webdunia
webdunia
webdunia

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಗೆ ವಿರೋಧವಾಗಿ ಬಿಜೆಪಿಗೆ ಓಟ್ ಹಾಕುತ್ತೇವೆ ಎಂದ ರಮ್ಯಾ ಅಭಿಮಾನಿಗಳು

ಮಂಡ್ಯ ಕ್ಷೇತ್ರದಲ್ಲಿ  ಜೆಡಿಎಸ್ ಗೆ ವಿರೋಧವಾಗಿ ಬಿಜೆಪಿಗೆ ಓಟ್ ಹಾಕುತ್ತೇವೆ ಎಂದ ರಮ್ಯಾ ಅಭಿಮಾನಿಗಳು
ಮಂಡ್ಯ , ಮಂಗಳವಾರ, 23 ಅಕ್ಟೋಬರ್ 2018 (11:29 IST)
ಮಂಡ್ಯ : ಲೋಕಸಭಾ ಉಪಚುನಾವಣಾ ಹಿನ್ನಲೆಯಲ್ಲಿ ಇದೀಗ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೀಳಿಯುತ್ತಿರುವ ಎಲ್.ಆರ್. ಶಿವರಾಮೇಗೌಡ ಅವರಿಗೆ ಮತ ಹಾಕದಿರಲು ರಮ್ಯಾ ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಈ ಹಿಂದೆ ಎಲ್.ಆರ್. ಶಿವರಾಮೇಗೌಡ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ರಮ್ಯಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ರಮ್ಯಾ ಅವರನ್ನು ಸೋಲಿಸಲು ಕಾಂಗ್ರೆಸ್ ಮುಖಂಡರ ಸಭೆ ನಡೆಸಿದ್ದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.


ಇದರಿಂದ ಕೋಪಗೊಂಡಿದ್ದ ರಮ್ಯಾ ಅಭಿಮಾನಿಗಳು ಶಿವರಾಮೇಗೌಡರು ಪಕ್ಷ ವಿರೋಧಿ ಕೆಲಸ ಮಾಡದೆ ಇದ್ದಿದ್ದರೆ ರಮ್ಯಾ ಸೋಲುತ್ತಿರಲಿಲ್ಲ. ಶಿವರಾಮೇಗೌಡ ಕಾಂಗ್ರೆಸ್ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಜೆಡಿಎಸ್ ಗೆ ವಿರೋಧವಾಗಿ ಬಿಜೆಪಿಗೆ ಓಟ್ ಹಾಕುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ಟೆಲ್ ತನ್ನ ಗ್ರಾಹಕರಿಗೆ ನೀಡಿದೆ 195 ರೂಪಾಯಿಯ ಹೊಸ ಪ್ಲಾನ್