Select Your Language

Notifications

webdunia
webdunia
webdunia
webdunia

ಆ ಎರಡು ಫ್ಲ್ಯಾಟ್ ನಲ್ಲಿ ನಡೆದಿತ್ತು ಷಡ್ಯಂತ್ರ: ರಮೇಶ್ ಜಾರಕಿಹೊಳಿ

ಆ ಎರಡು ಫ್ಲ್ಯಾಟ್ ನಲ್ಲಿ ನಡೆದಿತ್ತು ಷಡ್ಯಂತ್ರ: ರಮೇಶ್ ಜಾರಕಿಹೊಳಿ
ಬೆಂಗಳೂರು , ಮಂಗಳವಾರ, 9 ಮಾರ್ಚ್ 2021 (10:12 IST)
ಬೆಂಗಳೂರು: ರಾಸಲೀಲೆ ಸಿಡಿ ವಿವಾದದ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳ ಎದುರು ಬಂದ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.


ನನ್ನ ವಿರುದ್ಧ ಹಲವು ದಿನಗಳಿಂದ ಷಡ್ಯಂತ್ರ ನಡೆದಿದೆ. ಯಶವಂತಪುರದಲ್ಲಿರುವ ಫ್ಲ್ಯಾಟ್ ನ ನಾಲ್ಕನೇ ಫ್ಲೋರ್ ನಲ್ಲಿ ಮತ್ತು ಒರಾಯನ್ ಮಾಲ್ ಪಕ್ಕದ ಫ್ಲ್ಯಾಟ್ ನಲ್ಲಿ 5 ನೇ ಫ್ಲ್ಯಾಟ್ ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬೇರೆ ಬೇರೆ ಭಾಗದ ರಾಜಕೀಯ ಪ್ರಭಾವಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಸಿಡಿ ಮಾಡುವುದಕ್ಕೆ ನೂರಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಯುವತಿಗೆ 5 ಕೋಟಿ, ವಿದೇಶದಲ್ಲಿ ಎರಡು ಫ್ಲ್ಯಾಟ್ ನೀಡಲಾಗಿದೆ ಎಂದಿದ್ದಾರೆ. ಹಾಗಿದ್ದರೆ ಯುವತಿಯ ಬಗ್ಗೆ ಮಾಹಿತಿಯೇ ಇಲ್ಲದೆ ಇಷ್ಟೆಲ್ಲಾ ಮಾಹಿತಿ ಸಿಕ್ಕಿದ್ದು ಹೇಗೆ ಎಂದು ಮಾದ್ಯಮಗಳು ಪ್ರಶ್ನೆ ಮಾಡಲು ಮುಂದಾದಾಗ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?