Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿಹೊಳಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

ರಮೇಶ್ ಜಾರಕಿಹೊಳಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?
ಬೆಂಗಳೂರು , ಮಂಗಳವಾರ, 9 ಮಾರ್ಚ್ 2021 (10:04 IST)
ಬೆಂಗಳೂರು: ಸಿಡಿ ವಿವಾದದಿಂದಾಗಿ ಇಷ್ಟು ದಿನ ತೆರೆಮರೆಯಲ್ಲಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ.


ಈ ವೇಳೆ ಮಾತನಾಡುವಾಗ ಅವರು ಭಾವುಕರಾದರು. ನನ್ನ ಮೇಲೆ ಕೆಲವರು ಮಾಡಿದ ಷಡ್ಯಂತರವಿದು. ಇದು ಕೆಲವು ತಿಂಗಳಿನಿಂದ ನನ್ನ ಮೇಲೆ ನಡೆದ ಷಡ್ಯಂತ್ರದ ಭಾಗ. ಇದೆಲ್ಲಾ ನನಗೆ ಗೊತ್ತಿರಲಿಲ್ಲ. ಇದು ಶೇ.100 ರಷ್ಟು ನಕಲಿ ಸಿಡಿ.

24 ಗಂಟೆ ಮೊದಲೇ ನನಗೆ ಹೈಕಮಾಂಡ್ ಮಾಹಿತಿ ನೀಡಿತ್ತು. ನನಗೆ ನನ್ನ ಕುಟುಂಬದ ಗೌರವವೇ ಮುಖ್ಯ. ಈ ಮಾಹಿತಿ ಹೊರಬಂದ ತಕ್ಷಣ ಗಲಿಬಿಲಿಯಾದೆ. ಆ ಹುಡುಗಿಗೆ ಎರಡು ಫ್ಲ್ಯಾಟ್ ಕೊಟ್ಟಿದ್ದಾರೆ. ಇದು 5 ಕೋಟಿಯಲ್ಲ, 10-20 ಕೋಟಿ ವ್ಯವಹಾರ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಹಾಕದೇ ಬಿಡಲ್ಲ. ಆರೋಪವನ್ನು ಧೈರ್ಯವಾಗಿ ಎದುರಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಖಡಾಖಂಡಿತವಾಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣನ ಸ್ಥಾನ ತಮ್ಮನಿಗೆ: ಬಾಲಚಂದ್ರ ಜಾರಕಿಹೊಳಿ ಪರ ಶಾಸಕರ ಬ್ಯಾಟಿಂಗ್