Select Your Language

Notifications

webdunia
webdunia
webdunia
webdunia

ನನ್ನ ಸ್ಥಾನ ಸಹೋದರನಿಗೆ ಕೊಡಿ!ರಮೇಶ್ ಜಾರಕಿಹೊಳಿಯಿಂದ ಬೇಡಿಕೆ?

ನನ್ನ ಸ್ಥಾನ ಸಹೋದರನಿಗೆ ಕೊಡಿ!ರಮೇಶ್ ಜಾರಕಿಹೊಳಿಯಿಂದ ಬೇಡಿಕೆ?
ಬೆಂಗಳೂರು , ಗುರುವಾರ, 4 ಮಾರ್ಚ್ 2021 (09:20 IST)
ಬೆಂಗಳೂರು: ರಾಸಲೀಲೆ ಸಿಡಿ ವಿವಾದದಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ರಮೇಶ್ ಜಾರಕಿಹೊಳಿ ಸ್ಥಾನವನ್ನು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ನೀಡಲಾಗುತ್ತದೆಯೇ?

 

ಈ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ರಮೇಶ್ ಜಾರಕಿಹೊಳಿ ಹೊಂದಿದ್ದ ಜಲಸಂಪನ್ಮೂಲ ಖಾತೆಯನ್ನು ಸಹೋದರ ಬಾಲಚಂದ್ರ ಜಾರಕಿಹೊಳಿಗೆ ನೀಡಬೇಕೆಂದು ಸ್ವತಃ ರಮೇಶ್ ಜಾರಕಿಹೊಳಿಯೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎದುರು ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ಆದರೆ ತಕ್ಷಣಕ್ಕೇ ಇದನ್ನು ತೀರ್ಮಾನಿಸಲಾಗದು. ಪಕ್ಷದ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ನಾಯಕರು ಒಪ್ಪಿದರೆ ಬಾಲಚಂದ್ರ ಜಾರಕಿಹೊಳಿಗೆ ರಮೇಶ್ ಜಾರಕಿಹೊಳಿಯಿಂದ ತೆರವಾದ ಸಚಿವ ಸ್ಥಾನ ಸಿಗಲಿದೆ.

ಮುಂದೊಂದು ದಿನ ಆರೋಪದಿಂದ ಮುಕ್ತನಾಗಿ ಬಂದರೆ ಮತ್ತೆ ಸಚಿವ ಸ್ಥಾನ ತನಗೇ ಸಿಗಲು ರಮೇಶ್ ಜಾರಕಿಹೊಳಿ ಇಂತಹದ್ದೊಂದು ತಂತ್ರ ಹೆಣೆದಿರಬಹುದು. ಆದರೆ ಇದಕ್ಕೆ ಬಿಜೆಪಿ ನಾಯಕರು ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ದಿಡೀರ್ ನಿವೃತ್ತಿ ಘೋಷಿಸಿದ ಚಿನ್ನಮ್ಮ ಶಶಿಕಲಾ