Select Your Language

Notifications

webdunia
webdunia
webdunia
webdunia

ರಾಮಲಿಂಗಾ ರೆಡ್ಡಿಯವರ ರಾಜೀನಾಮೆ ವಿಚಾರಕ್ಕೆ ಇಂದು ತೆರೆ

ರಾಮಲಿಂಗಾ ರೆಡ್ಡಿಯವರ ರಾಜೀನಾಮೆ ವಿಚಾರಕ್ಕೆ ಇಂದು ತೆರೆ
ಬೆಂಗಳೂರು , ಸೋಮವಾರ, 15 ಜುಲೈ 2019 (10:26 IST)
ಬೆಂಗಳೂರು : ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿಯವರು ಇಂದು ಸದನಕ್ಕೆ ಹಾಜರಾಗಲಿದ್ದು, ಅವರ  ಮುಂದಿನ ನಡೆ ಏನು ಎಂಬ ಗೊಂದಲ ಹಲವರಲ್ಲಿ ಮೂಡಿದೆ.




ನಿನ್ನೆ ಸಂಜೆ, ಬೆಂಗಳೂರು ಹೊರವಲಯದ ತೋಟದ ಮನೆಗೆ ಹೋಗಿದ್ದ ಸಿಎಂ, ಡಿಸಿಎಂ ಪರಮೇಶ್ವರ್, ಮಾಜಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಕೆ ಬ್ರದರ್ಸ್, ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಲು ಬಾರೀ ಕಸರತ್ತು ನಡೆಸಿದ್ದರು.


ಈ ಬಗ್ಗೆ ಇದೀಗ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನನ್ನ ರಾಜೀನಾಮೆ ಅಂಗೀಕಾರವಾಗಿಲ್ಲ. ನಾನಿನ್ನು ಸದನದ ಸದಸ್ಯ. ಹೀಗಾಗಿ ನಾನು ಇಂದು ಅಧಿವೇಶನಕ್ಕೆ ಹಾಜರಾಗುತ್ತೇನೆ. ಇಂದು ಮಧ್ಯಾಹ್ನ  ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ರಾಮಲಿಂಗಾ ರೆಡ್ಡಿಯವರ ರಾಜೀನಾಮೆ ವಿಚಾರಕ್ಕೆ ಇಂದು ತೆರೆಬೀಳಲಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನ ಸುತ್ತುವುದನ್ನು ಫೋಟೋ ತೆಗೆದ ಮಾಧ್ಯಮಗಳ ಮೇಲೆ ಎಚ್ ಡಿ ರೇವಣ್ಣ ಸಿಟ್ಟು