Select Your Language

Notifications

webdunia
webdunia
webdunia
webdunia

ರಾಜ್ಯ ಸಭೆ ಚುನಾವಣೆ: ಮತದಾನ ಮಾಡುವಾಗ ಎಡವಟ್ಟು ಮಾಡಿದ ಕಾಗೋಡು ತಿಮ್ಮಪ್ಪ

ರಾಜ್ಯ ಸಭೆ ಚುನಾವಣೆ: ಮತದಾನ ಮಾಡುವಾಗ ಎಡವಟ್ಟು ಮಾಡಿದ ಕಾಗೋಡು ತಿಮ್ಮಪ್ಪ
ಬೆಂಗಳೂರು , ಶುಕ್ರವಾರ, 23 ಮಾರ್ಚ್ 2018 (11:03 IST)
ಬೆಂಗಳೂರು: ವಿಧಾನಸೌಧದ ಕಮಿಟಿ ರೂಂನಲ್ಲಿ ನಡೆಯುತ್ತಿರುವ ರಾಜ್ಯ ಸಭೆ ಚುನಾವಣೆಯಲ್ಲಿ ಮತದಾನ ಮಾಡುವಾಗ ಕಾಂಗ್ರೆಸ್ ಶಾಸಕ ಕಾಗೋಡು ತಿಮ್ಮಪ್ಪ ಎಡವಟ್ಟು ಮಾಡಿದ್ದಾರೆ.

ಮತ ಚಲಾಯಿಸುವಾಗ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಬದಲು ಬ್ಯಾಲೆಟ್ ಪೇಪರ್ ನಲ್ಲಿ ಬೇರೆ ಅಭ್ಯರ್ಥಿ ಹೆಸರಿನ ಎದುರು ಸೀಲ್ ಹಾಕಿದ್ದಾರೆ. ಕಾಂಗ್ರೆಸ್ ಏಜೆಂಟ್ ಗೆ ಮತ ಪತ್ರ ತೋರಿಸಿದಾಗ ಈ ಎಡವಟ್ಟು ಬಯಲಾಗಿದೆ.

ಬಳಿಕ, ಮತ್ತೊಂದು ಮತ ಪತ್ರ ಪಡೆದು ಕಾಗೋಡು ತಿಮ್ಮಪ್ಪ ಸರಿಯಾದ ಅಭ್ಯರ್ಥಿಗೇ ಮತ ಚಲಾಯಿಸಿದರು. ಮತದಾನಕ್ಕೆ ಮೊದಲು ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿಗೆ ಅಡ್ಡ ಮತದಾನ ಮಾಡದಂತೆ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ತಾಂತ್ರಿಕ ದೋಷವಿದ್ದ ವಿಮಾದನಲ್ಲೇ ದೆಹಲಿಗೆ ಹಾರಿದ ಸಚಿವ ಅನಂತ ಕುಮಾರ್