Select Your Language

Notifications

webdunia
webdunia
webdunia
webdunia

PSI ಹುದ್ದೆಗಾಗಿ ‘ಕೈ’ಮುಖಂಡನಿಂದ ದೋಖಾ

PSI ಹುದ್ದೆಗಾಗಿ ‘ಕೈ’ಮುಖಂಡನಿಂದ ದೋಖಾ
ಬೆಳಗಾವಿ , ಶುಕ್ರವಾರ, 31 ಮಾರ್ಚ್ 2023 (19:00 IST)
ಅಮಾಯಕ ರೈತನಿಗೆ PSI ಹುದ್ದೆ ಕೊಡಿಸುತ್ತೇನೆ ಅಂತಾ ಹೇಳಿ ಕಾಂಗ್ರೆಸ್​ ಮುಖಂಡನಿಂದ 40 ಲಕ್ಷ ಹಣ ದೋಖಾ ಮಾಡಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರೈತ ವಿಠ್ಠಲ್‌ ಪಕೀರಪ್ಪ ಪುತ್ರ ಸಚಿನ್‌ಗೆ ಕೆಲಸ ಕೊಡಿಸೋದಾಗಿ ಕಾಂಗ್ರೆಸ್ ಮುಖಂಡ ಸೈಯದ್‌ ಜಾವೀದ್ ಭರವಸೆ ನೀಡಿದ್ದು, ಅಮಾಯಕ ರೈತನಿಂದ 40 ಲಕ್ಷ ಹಣ ಪಡೆದು ಎಸ್ಕೇಪ್ ಆಗಿದ್ದಾನೆ. PSI ಹುದ್ದೆ ಕೊಡಿಸೋದಾಗಿ ರೈತ ಪಕೀರಪ್ಪನಿಂದ ಹಂತ ಹಂತವಾಗಿ 40 ಲಕ್ಷ ಪಡೆದುಕೊಂಡಿದ್ದಾರೆ.. ಮೊದಲಿಗೆ ಕಾನ್ಸ್‌ಟೇಬಲ್ ಹುದ್ದೆ ಕೊಡಿಸೋದಾಗಿ ಹೇಳಿ 6 ಲಕ್ಷ ಪಡೆದಿದ್ದ ಸೈಯದ್‌, ಆ ನಂತರ PSI ಹುದ್ದೆ ಕೊಡಿಸುವ ಆಮಿಷ ತೋರಿಸಿ 34 ಲಕ್ಷ ಹಣ ಪೀಕಿದ್ದ.. ಗೋವಾ, ಹುಬ್ಬಳ್ಳಿ, ಬೆಂಗಳೂರು ಸೇರಿ ವಿವಿಧ ಸ್ಥಳಗಳಲ್ಲಿ ರೈತ ಪಕೀರಪ್ಪನಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಧ್ವಜಹಾರಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ