Publish Date: Tue, 24 Dec 2019 (10:23 IST)
Updated Date: Tue, 24 Dec 2019 (10:25 IST)
ಮಂಗಳೂರು: ನಾಳೆ ಸೂರ್ಯ ಗ್ರಹಣ ದೋಷ ಪರಿಹಾರ ನಿಮಿತ್ತ ಕೇರಳದ ದೇವಾಲಯಗಳಿಗೆ ಭೇಟಿ ನೀಡಲು ದೇವರ ನಾಡಿಗೆ ಬಂದಿಳಿದ ಸಿಎಂ ಯಡಿಯೂರಪ್ಪಗೆ ಪ್ರತಿಭಟನೆ ಬಿಸಿ ತಾಕಿದೆ.
ಮಂಗಳೂರಿನಲ್ಲಿ ಪೌರತ್ವ ಖಾಯಿದೆ ವಿರೋಧಿಸಿ ಪ್ರತಿಟನೆ ನಡೆಸುತ್ತಿದ್ದಾಗ ನಡೆದ ಹಿಂಸಾಚಾರ ತಡೆಯಲು ಪೊಲೀಸರು ಗೋಲಿಬಾರ್ ನಡೆಸಿದ್ದಕ್ಕೆ ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶಿಸಿ, ಕಾರಿಗೆ ಮುತ್ತಿಗೆ ಹಾಕಲೆತ್ನಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡಿಸಿದ್ದಾರೆ.