Publish Date: Tue, 24 Dec 2019 (09:38 IST)
Updated Date: Tue, 24 Dec 2019 (09:40 IST)
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ನಾಯಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸಿದ್ಧರಾಮಯ್ಯ ಹಿಂಪಡೆಯಲು ನಿರ್ಧಾರ ಮಾಡಿದ್ದು, ಇದು ಮೂಲ ಕಾಂಗ್ರೆಸ್ಸಿಗರ ಅಸಹನೆಗೆ ಕಾರಣವಾಗಿದೆ ಎನ್ನಲಾಗಿದೆ.
ಉಪ ಚುನಾವಣೆ ಸೋಲಿನ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಕೆಪಿಸಿಸಿ ಸಮೀಕ್ಷಕರಿಗೆ ಮೂಲ ಕಾಂಗ್ರೆಸ್ಸಿಗರು ಹೊಸ ನಾಯಕನ ಸ್ಥಾನಕ್ಕೆ ಜಿ ಪರಮೇಶ್ವರ್ ಹೆಸರು ಶಿಫಾರಸ್ಸು ಮಾಡುತ್ತಿದ್ದಂತೇ ಸಿದ್ದರಾಮಯ್ಯ ನಿರ್ಧಾರ ಬದಲಿಸುವ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಶಾಸಕಾಂಗ ಪಕ್ಷದ ನಾಯಕನಾಗಿರುವವರೇ ಕಾಂಗ್ರೆಸ್ ನ ಸಿಎಂ ಅಭ್ಯರ್ಥಿಯಾಗುತ್ತಾರೆ. ಹೀಗಾಗಿಯೇ ಮುಂದೊಂದು ದಿನ ಚುನಾವಣೆ ನಡೆದಾಗ ಸಿಎಂ ಹುದ್ದೆ ತಮಗೇ ಸಿಗಲು ಸಿದ್ದರಾಮಯ್ಯ ಈ ತಂತ್ರ ಹೂಡಿರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
Krishnaveni K
Publish Date: Tue, 24 Dec 2019 (09:38 IST)
Updated Date: Tue, 24 Dec 2019 (09:40 IST)