ಆರ್ ಎಸ್ಎಸ್ ಗೆ ಬಿಗ್ ಶಾಕ್ ಕೊಟ್ಟ ಪ್ರಿಯಾಂಕ್ ಖರ್ಗೆ: ನಾನು ಯಾವುದಕ್ಕೂ ಹೆದರಲ್ಲ ಎಂದ ಗೃಹಸಚಿವ

ಕೃಷ್ಣವೇಣಿ ಕೆ
ಸೋಮವಾರ, 6 ಜುಲೈ 2026 (12:11 IST)
ಬೆಂಗಳೂರು: ಆರ್ ಎಸ್ಎಸ್ ಸಂಘಟನೆಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ನಾನು ಯಾವುದಕ್ಕೂ ಹೆದರಲ್ಲ ಎಂದು ಸಂದೇಶ ರವಾನಿಸಿದ್ದಾರೆ.

ರಾಜ್ಯದಲ್ಲಿ ಇನ್ನು ಮುಂದೆ ಆರ್ ಎಸ್ಎಸ್ ಪಥಸಂಚಲನ ಮಾಡಬೇಕಾದರೆ ಅನುಮತಿ ಕಡ್ಡಾಯ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದರೊಂದಿಗೆ ಆರ್ ಎಸ್ಎಸ್ ಮತ್ತು ಸಚಿವರ ನಡುವಿನ ತಿಕ್ಕಾಟ ತಾರಕಕ್ಕೇರಿದೆ.

ನಾಳೆ ಯಾರೋ ಯಾವುದೋ ಧ್ವಜದ ಅಡಿಯಲ್ಲಿ ಸಂಘಟನೆ ಮಾಡಿ ಚಂದಾ ಕಲೆಕ್ಟ್ ಮಾಡಬಹುದು. ಹಾಗಂತ ಇಡಿ ಇಲಾಖೆಯವರು ಸುಮ್ಮನೇ ಕೂರುತ್ತಾರಾ? ಆರ್ ಎಸ್ಎಸ್ ನವರು ಪಥಸಂಚಲನ ಮಾಡಬೇಕಾದರೆ ಅನುಮತಿ ಪಡೆಯಬೇಕು. ಈ ಬಗ್ಗೆ ಈಗಷ್ಟೇ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.

ಇತ್ತೀಚೆಗೆ ಆರ್ ಎಸ್ಎಸ್ ಸಂಘಟನೆ ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು. ಇದರ ಬಗ್ಗೆ ಮಾತನಾಡಿರುವ ಅವರು 100 ವರ್ಷ ಹಳೆಯ ಸಂಘಟನೆ ಅಲ್ವಾ? ಬಹುಶಃ ಕಾಗದ ಪತ್ರಗಳನ್ನು ಹುಡುಕುತ್ತಿರಬೇಕು. ಹುಡುಕಲಿ.  ಇದರ ನಡುವೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ. ನನ್ನ ಕುಟುಂಬ, ನಾನು ಕಪ್ಪಗಿದ್ದೀನಾ, ಬೆಳ್ಳಗಿದ್ದೀನಾ ಎಂದೆಲ್ಲಾ.. ಇದಕ್ಕೆಲ್ಲಾ ನಾನು ಹೆದರುವವನಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಸ್ ಎಕ್ಸ್ ಪ್ರೆಸ್ ನಂತೆ ಓಡುತ್ತಿದ್ದರೆ ರಸ್ತೆ ನೋಡಬೇಕಾದ ಡ್ರೈವರ್ ಮೊಬೈಲ್ ನಲ್ಲಿ ಮಗ್ನ: ಭಯಾನಕ Video

ಕರ್ತವ್ಯದ ವೇಳೆ ಮೃತಪಟ್ಟ ಎಸ್ಐಆರ್ ಅಧಿಕಾರಿ ಭುವನಾ ಕುಟುಂಬಕ್ಕೆ ಡಿಸಿಎಂ ಭರ್ಜರಿ ಪರಿಹಾರ

ನಗು ನಗುತ್ತಾ ಗಂಡನ ಮನೆಗೆ ಹೋಗಿದ್ದವಳು..ಮದುವೆಯಾದ ಕೆಲವೇ ದಿನಕ್ಕೆ ಸಾವು: ದೆಹಲಿಯ ಆಕೃತಿ ಸಾವಿನ ಹಿಂದೆ ಅನುಮಾನ Video

ಅಯೋಧ್ಯೆ ರಾಮನ ದುಡ್ಡಿಗೆ ಕನ್ನಡ ಹಾಕಿದ 8 ಆರೋಪಿಗಳ ಹಿನ್ನಲೆ ಇಲ್ಲಿದೆ

Karnataka Weather: ಕರ್ನಾಟಕದ ಯಾವ ಜಿಲ್ಲೆಗಳಿಗೆ ಇಂದು ಮಳೆಯ ಸೂಚನೆಯಿದೆ ಗಮನಿಸಿ

ಮುಂದಿನ ಸುದ್ದಿ
Show comments