Select Your Language

Notifications

webdunia
webdunia
webdunia
webdunia

ತರಗತಿ ನಡೆಸುತ್ತಿದ್ದ ವೇಳೆಯಲ್ಲೇ ಪ್ರಿನ್ಸಿಪಾಲ್ ರ ಕೊಲೆ

ತರಗತಿ ನಡೆಸುತ್ತಿದ್ದ ವೇಳೆಯಲ್ಲೇ ಪ್ರಿನ್ಸಿಪಾಲ್ ರ ಕೊಲೆ
ಬೆಂಗಳೂರು , ಭಾನುವಾರ, 14 ಅಕ್ಟೋಬರ್ 2018 (17:06 IST)
ಪಬ್ಲಿಕ್ ಶಾಲೆಯೊಂದರ ಪ್ರಿನ್ಸಿಪಾಲ್ ರೊಬ್ಬರನ್ನು ತರಗತಿ ನಡೆಯುತ್ತಿದ್ದ ವೇಳೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಬೆಂಗಳೂರಿನ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಗ್ರಹಾರ ದಾಸರಹಳ್ಳಿಯ ಹಾವಲೂರು ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ರಂಗನಾಥ್ ಕೊಲೆಯಾದವರು ಎಂದು ಗುರುತಿಸಲಾಗಿದೆ.

ರಜಾ ದಿನವಾದ ಭಾನುವಾರ ವಿಶೇಷ ತರಗತಿ ನಡೆಸುತ್ತಿದ್ದರು. ಈ ವೇಳೆ ಪಾಠ ಮಾಡುವ ಸಂದರ್ಭದಲ್ಲಿಯೇ ಏಕಾಏಕಿಯಾಗಿ ನುಗ್ಗಿದ 7 ಜನ ದುಷ್ಕರ್ಮಿಗಳು ಪಾಠ ಮಾಡುತ್ತಿದ್ದ ರಂಗನಾಥ್ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೋಮ್ ಗಾರ್ಡಗಳಿಂದ ಸ್ವಚ್ಛತಾ ಅಭಿಯಾನ