Select Your Language

Notifications

webdunia
webdunia
webdunia
webdunia

ಮಳೆಗಾಗಿ ಪ್ರಾರ್ಥನೆ: ಉಚ್ಚೆಂಗಮ್ಮನಿಗೆ 101 ಕೊಡಗಳ ನೀರಿನ ಅಭಿಷೇಕ

ಮಳೆಗಾಗಿ ಪ್ರಾರ್ಥನೆ: ಉಚ್ಚೆಂಗಮ್ಮನಿಗೆ 101 ಕೊಡಗಳ ನೀರಿನ ಅಭಿಷೇಕ
ದಾವಣಗೆರೆ , ಶುಕ್ರವಾರ, 6 ಜುಲೈ 2018 (14:38 IST)
ರಾಜ್ಯದಲ್ಲಿ ಮಳೆರಾಯನ ಆರ್ಭಟ ಶುರುವಾಗಿದೆ ಆದ್ರೆ ದಾವಣಗೆರೆಯಲ್ಲಿ ಮಾತ್ರ ಮಳೆಯ ದರ್ಶನವಿಲ್ಲ. ಇದರಿಂದ ಭಕ್ತರು ಉಚ್ಚಂಗೆಮ್ಮನ ಮೊರೆ ಹೋಗಿದ್ದಾರೆ‌.

ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಆಧಿಶಕ್ತಿ ದೇವತೆ ಉಚ್ಚಂಗಿದುರ್ಗದ ಶ್ರೀ ಉಚ್ಚಂಗೆಮ್ಮನಿಗೆ 101 ಕೊಡಗಳ ನೀರಿನ ಅಭಿಷೇಕ ಮಾಡಿ ಮಳೆ ತರಿಸು ತಾಯೆ ಎಂದು ಪ್ರಾರ್ಥಿಸುತ್ತಿದ್ದಾರೆ. ರಾಜ್ಯದ ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗುತ್ತಿದ್ದು ದಾವಣಗೆರೆ ಜಿಲ್ಲಾದ್ಯಂತ ಮೋಡ ಮುಸುಕಿನ ವಾತವರಣವಿದೆ. ಆದ್ರೆ ಮಳೆಯ ಕಾಣದೆ ಜನರು ತತ್ತರಿಸಿ ಹೋಗಿದ್ದಾರೆ.

ದೇವಿ ಉಚ್ಚಂಗೆಮ್ಮನಿಗೆ ಪೂಜೆ ಮಾಡಿದ್ರೆ ಮಳೆ ಬರುತ್ತೆ ಎಂದು ನಂಬಿರುವ ಭಕ್ತರು ಮುಂಜಾನೆಯಿಂದಲೆ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಬೆಟ್ಟದ ಕೆಳಗೆ ಇರುವ ಅರಿಶಿಣ ಹೊಂಡದ ನೀರನ್ನು ದೇವಿಗೆ ಅಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಗೊಂಡ ಕೋತಿ - ಮಾನವೀಯತೆ ಮೆರೆದ ಯುವಕರು