Webdunia - Bharat's app for daily news and videos

Install App

ಜಾರ್ಜ್ ಅವರೇ ನಿಮಗೆ ಸ್ಯಾಲರಿ ಬರಲ್ವಾ: ಪ್ರತಾಪ್ ಸಿಂಹ ಟಾಂಗ್

Krishnaveni K
ಗುರುವಾರ, 20 ಫೆಬ್ರವರಿ 2025 (16:29 IST)
ಬೆಂಗಳೂರು: ಗೃಹಲಕ್ಷ್ಮಿ ಹಣ ಬರ್ತಿಲ್ಲ ಎನ್ನಲು ಅದೇನು ಸಂಬಳವಾ ಎಂದಿದ್ದ ಕೆಜೆ ಜಾರ್ಜ್ ಗೆ ಇಂದು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ನಿಮಗೆ ತಿಂಗಳ ಸ್ಯಾಲರಿ ಬರಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ.

ಗೃಹಲಕ್ಷ್ಮಿ ಹಣ ಕಳೆದ ಮೂರು ತಿಂಗಳಿನಿಂದ ಬಂದಿಲ್ಲ.  ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಚಿವ ಕೆಜೆ ಜಾರ್ಜ್ ತಿಂಗಳು ತಿಂಗಳು ಬರಕ್ಕೆ ಅದೇನು ಸಂಬಳವಾ ಎಂದು ಉಡಾಫೆಯಿಂದ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಇಂದು ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರತೀ ತಿಂಗಳು ಹಣ ಹಾಕ್ತೀವಿ ಎಂದು ಹೇಳಿಕೊಂಡು ಅಲ್ವಾ ನೀವು ಅಧಿಕಾರಕ್ಕೆ ಬಂದಿದ್ದು. ಪ್ರತೀ ಬಾರಿ ಚುನಾವಣೆ ನಡೆಯುವಾಗ ಕರೆಕ್ಟ್ ಆಗಿ ಹಣ ಹಾಕ್ತೀರಿ. ನಿರಂತರವಾಗಿ ನಡೆಯುವ ಯೋಜನೆಗಳಿಗೆ ಚುನಾವಣಾ ನೀತಿ ಸಂಹಿತ ಅನ್ವಯವಾಗಲ್ಲ ಎಂಬುದನ್ನೇ ದಾಳ ಮಾಡಿಕೊಂಡು ಹಣ ಹಾಕಿ ಮತ ಸೆಳೆಯುತ್ತೀರಿ.

ಈಗಲೂ ಕರೆಕ್ಟ್ ಆಗಿ ಹಣ ಹಾಕಿ. ನೀವು ಹಾಕ್ತೀರಿ ಎಂದು ಭರವಸೆ ನೀಡಿ ಅಲ್ವಾ ಅಧಿಕಾರಕ್ಕೆ ಬಂದಿದ್ದು. ಸಚಿವ ಜಾರ್ಜ್ ಅವರೇ ನಿಮಗೆ ಪ್ರತೀ ತಿಂಗಳು ಸಂಬಳ ಬರಲ್ವಾ? ಜನರಿಗೂ ಕೊಟ್ಟ ಮಾತಿನಂತೆ ತಿಂಗಳು ತಿಂಗಳು ಹಣ ಕೊಡಿ’ ಎಂದು ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments