Select Your Language

Notifications

webdunia
webdunia
webdunia
webdunia

ಕೂಲ್ ಡ್ರಿಂಕ್ಸ್ ವ್ಯಾಪಾರಿ ನಷ್ಟ ಭರಿಸಿದ ಪ್ರತಾಪ್

ಕೂಲ್ ಡ್ರಿಂಕ್ಸ್ ವ್ಯಾಪಾರಿ ನಷ್ಟ ಭರಿಸಿದ ಪ್ರತಾಪ್
ಗದಗ , ಮಂಗಳವಾರ, 2 ಮೇ 2023 (17:00 IST)
ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ಭವ್ಯ ಸಾರ್ವಜನಿಕ ಸಮಾವೇಶ ನಡೆದಿತ್ತು. ಸಮಾವೇಶದ ಸಮೀಪ ಕೂಲ್ ಡ್ರಿಂಕ್ಸ್ ಮಾರಲು ಸಮೀರ್​​ ಎಂಬಾತ ಬಂದಿದ್ದ. ಸಮಾರಂಭದಲ್ಲಿ ಭಾಗವಹಿಸಿದ್ದ ಜನರು, ಈ ವಾಹನವನ್ನು ಬಿಜೆಪಿಯವರೇ ತರಿಸಿದ್ದಾರೆ. ಬೇಸಿಗೆಯ ಬಿಸಿಲಿನ ಧಗೆ, ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಬಿಜೆಪಿಯವರೇ ಕಲ್ಪಿಸಿರುವ ವ್ಯವಸ್ಥೆಯಿದು ಎಂದು ತಿಳಿದು, ಎಲ್ಲರೂ ಗಾಡಿಗೆ ಮುತ್ತಿಗೆ ಹಾಕಿ, ಕೂಲ್ ಡ್ರಿಂಕ್ಸ್​​​ ಖಾಲಿ ಮಾಡಿದ್ರು. ಸುಮಾರು 35 ಸಾವಿರ ನಷ್ಟವನ್ನು ಅನುಭವಿಸಿದ ಸಮೀರ್ ಸಾಬ್​ ಕಣ್ಣೀರು ಹಾಕಿದ್ರು. ಈ ನಷ್ಟವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಭರಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಸಮೀರ್ ಹಸನ್ ಸಾಬ್​ಗೆ ಹಣ ಕಳುಹಿಸಿ ‘ಸಾರಿ ಬ್ರದರ್’ ಎಂದು ಕ್ಷಮೆಯಾಚಿಸಿ, ಧನ್ಯವಾದಗಳು ಎಂದು ಹೇಳಿದ್ದಾರೆ. ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಹರಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಭರ್ಜರಿಯಾಗಿ ಚುನಾವಣಾ ಪ್ರಚಾರ