Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರ ಕುಸಿದುಬೀಳುವ ಹಂತದಲ್ಲಿದೆ ಎಂದು ಕಿಡಿಕಾರಿದ ಪ್ರಮೋದ್ ಮುತಾಲಿಕ್

ಬಿಜೆಪಿ ಸರ್ಕಾರ ಕುಸಿದುಬೀಳುವ ಹಂತದಲ್ಲಿದೆ ಎಂದು ಕಿಡಿಕಾರಿದ ಪ್ರಮೋದ್ ಮುತಾಲಿಕ್
bangalore , ಗುರುವಾರ, 25 ಆಗಸ್ಟ್ 2022 (19:20 IST)
ಹಿಂದೂ ಕಾರ್ಯಕರ್ತರಿಗೆ ಇನ್ನೂ ಮುಂದೆ ಮೀಸಲಾತಿ ಕೊಡಬೇಕು ಎಂದು ಪ್ರೆಸ್ ಕ್ಲಬ್ ನಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ಹಿಂದೂಗಳ ಪರ ಹೋರಾಟಕ್ಕೆ ಹಿಂದೂತ್ವ ಉಳಿಸಬೇಕು.ಇದುವರೆಗೂ ಗೋ ಹತ್ಯೆಯನ್ನು ನಿಷೇಧಿಸಲಾಗಿದೆ ಅದ್ರೂ ಇನ್ನೂ ನಿಂತಿಲ್ಲ.ಎಲ್ಲಾ ಕಡೆಯಲ್ಲೂ ಗೋ ಹತ್ಯೆ ನಡೆಯುತ್ತಿದೆ.ನಮ್ಮ ಹಿಂದೂ ಕಾರ್ಯಕರ್ತರಿಗೆ ಅವಕಾಶ ನೀಡಿದ್ರೆ ಇಂತಹ ಹೋರಾಟ ಮಾಡಬೇಕಾಗುತ್ತೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
 
ಬಿಜೆಪಿ ಪಕ್ಷವನ್ನು ನಾವೇ ಬೆಳೆಸಿರುವ ಪಕ್ಷ .ಇದು ನಮ್ಮದೇ ಪಕ್ಷ ಬಿಜೆಪಿ.ನೂರಕ್ಕೆ ನೂರರಷ್ಟು ಪಕ್ಷವನ್ನು ತಿದ್ದಿ ತೀಡುತ್ತೇವೆ.ನಾವು ಕುಡುಕ ಗಂಡನನ್ನ ಕಟ್ಟಿಕೊಂಡಿದ್ದೇವೆ ,ಹಾಗಾಗಿ ಈಗ ಅದನ್ನು ಕಳೆದುಕೊಳ್ಳುತ್ತಿಲ್ಲ ಇತ್ತ ಡೈವರ್ಸ್ ಕೊಡಲು ಆಗುತ್ತಿಲ್ಲ.ನಮಗೆ 25 ಸೀಟು ಕೊಡಿ ನಾವು ಮಾಡಿ ತೋರಿಸುತ್ತೇವೆ.ನಮಗೆ ಅಧಿಕಾರ ಕೊಡಿ ,ಮುಂದೆ ನೀವೇ ನೋಡಿ .ಈ ಸರ್ಕಾರ ಕುಸಿದು ಬೀಳುವ ಹಂತದಲ್ಲಿದೆ ಎಂದು ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ ಬ್ರಷ್ಟೋತ್ಸವ ಆಚರಣೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟಾಂಗ್