Select Your Language

Notifications

webdunia
webdunia
webdunia
webdunia

ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಲಗ್ಗೆಇಟ್ಟ ಪ್ರಜ್ವಲ್

ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಲಗ್ಗೆಇಟ್ಟ ಪ್ರಜ್ವಲ್
ಹಾಸನ , ಶನಿವಾರ, 22 ಡಿಸೆಂಬರ್ 2018 (14:22 IST)
ಹಾಸನ ವಿಧಾನ ಸಭಾ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಪ್ರಜ್ವಲ್ ರೇವಣ್ಣ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಹೆಚ್.ಎಸ್ ಪ್ರಕಾಶ್ ನಿಧನದಿಂದ ತೆರವಾಗಿರುವ ಸ್ಥಾನ ಕಾಪಾಡಲು ಪ್ರಜ್ವಲ್ ಎಂಟ್ರಿಕೊಟ್ಟಿದ್ದಾರೆ. ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡಗೆ ಟಕ್ಕರ್ ಕೊಡಲು ಎಂಟ್ರಿ ಕೊಟ್ಟ ಪ್ರಜ್ವಲ್ ರೇವಣ್ಣರಿಗೆ ಕಾರ್ಯಕರ್ತರು, ಮುಖಂಡರು ಸಾಥ್ ನೀಡಿದ್ದಾರೆ.
ಸದ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರೋ ಪ್ರಜ್ವಲ್ ರೇವಣ್ಣ, ಸದ್ದಿಲ್ಲದೇ ಹಾಸನ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಪ್ರತಿ ವಾರವೂ  ಹಾಸನದಲ್ಲಿ ಮುಖಂಡರುಗಳ ಮನೆಗಳಲ್ಲಿ ಔತಣಕೂಟಗಳ ಜೊತೆ ಸಭೆ ನಡೆಸುತ್ತಿದ್ದಾರೆ.
ದೇವಾಲಯ, ಮಸೀದಿಗಳಲ್ಲಿ ವಿಶೇಷ ಸಭೆ ನೆಡೆಸುತ್ತಿರುವ ಪ್ರಜ್ವಲ್ ರೇವಣ್ಣರಿಗೆ ಜನಬೆಂಬಲ ವ್ಯಕ್ತವಾಗುತ್ತಿದೆ.
ಪ್ರಜ್ವಲ್ ಹಾಸನದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಈ ಹಿಂದೆ ದೇವೇಗೌಡರು ನೀಡಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಪೌರ ಕಾರ್ಮಿಕರ ಅನಿರ್ಧಿಷ್ಟ ಧರಣಿ ಮುಂದುವರಿಕೆ..!