Select Your Language

Notifications

webdunia
webdunia
webdunia
webdunia

ನಾನು ಕೇಳಿಲ್ಲ ಆದ್ರೂ ಯುವ ಕೋಟಾದಲ್ಲಿ ನನಗೇ ಸಚಿವ ಸ್ಥಾನ ಕೊಡ್ತಾರೆ ಅಂತ ಎಲ್ರೂ ಹೇಳ್ತಿದ್ದಾರೆ: ಪ್ರದೀಪ್ ಈಶ್ವರ್

Pradeep Eshwar constituency
ಬೆಂಗಳೂರು: ನಾನಾಗಿಯೇ ಯಾರ ಬಳಿಯೂ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ಆದರೆ ಈ ಬಾರಿ ಯುವ ಕೋಟಾದಲ್ಲಿ ನನಗೇ ಸಚಿವ ಸ್ಥಾನ ಕೊಡಬಹುದು ಎಂದು ಎಲ್ಲರೂ ಹೇಳ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿಕೊಂಡಿದ್ದಾರೆ.

ಸಚಿವ ಸಂಪುಟ ಎರಡನೇ ಲಿಸ್ಟ್ ಬಿಡುಗಡೆಗೆ ಮುನ್ನ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ಇಂದು ದೆಹಲಿಗೆ ಸಿಎಂ ಡಿಕೆ ಶಿವಕುಮಾರ್ ತೆರಳಿದ್ದಾರೆ. ಇದರ ನಡುವೆ ಮಾಧ್ಯಮಗಳು ಪ್ರದೀಪ್ ಈಶ್ವರ್ ರನ್ನು ಮಾತನಾಡಿಸಿವೆ.

ಈ ವೇಳೆ ಪ್ರತಿಕ್ರಿಯಿಸಿದ ಅವರು ‘ಈ ಬಾರಿ ಯುವ ಕೋಟಾದಲ್ಲಿ ಎರಡು ಸ್ಥಾನ ಕೊಡ್ತಾರಂತೆ ಸಾರ್. ಅದು ನನಗೇ ಇರಲಿ, ರವಿ ಗಾಣಿಗ ಇರಲಿ, ಶರತ್ ಬಚ್ಚೇಗೌಡ ಇರಲಿ ಯಾರಿಗಾನಾ ಕೊಡಲಿ. ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಈ ಬಾರಿ ಒಬಿಸಿ  ಸಮುದಾಯದಿಂದ ಚಿಕ್ಕಬಳ್ಳಾಪುರಕ್ಕೆ ಒಂದು ಸ್ಥಾನ ಕೊಡಬಹುದು ಎಂದು ನಿರೀಕ್ಷೆಯಿದೆ.


ಸಚಿವ ಸ್ಥಾನ ಕೊಡಿ ಎಂದು ನಾನಾಗಿ ಯಾರ ಬಳಿಯೂ ಕೇಳಿಲ್ಲ. ಸಿಎಂ ಸಾಹೇಬ್ರ ಬಳಿ ನನಗೆ ಆಶೀರ್ವಾದ ಮಾಡಿ ಎಂದು ಕೇಳಿದ್ದೇನೆ. ಯುವ ಕೋಟಾದಲ್ಲಿ ನನಗೆ ಸಿಗಬಹುದು ಎಂದು ಹೇಳ್ತಿದ್ದಾರೆ. ನೋಡೋಣ’ ಎಂದಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಒಡೆಯ ನೀರಿಗೆ ಬಿದ್ದನೆಂದು ಬೋಟ್ ನಲ್ಲಿದ್ದ ನಾಯಿ ಮಾಡಿದ್ದೇನು ನೋಡಿ: ನಿಯತ್ತು ಅಂದ್ರೆ ಇದು Video