Select Your Language

Notifications

webdunia
webdunia
webdunia
webdunia

ರಾಜಕೀಯ ಲಾಭ ಮೇಕೆದಾಟು ಪಾದಾಯಾತ್ರೆ

ರಾಜಕೀಯ ಲಾಭ ಮೇಕೆದಾಟು ಪಾದಾಯಾತ್ರೆ
ಬೆಂಗಳೂರು , ಗುರುವಾರ, 3 ಮಾರ್ಚ್ 2022 (18:02 IST)
ರಾಜಕೀಯ ನಾಯಕತ್ವದ ಮೇಲಾಟಕ್ಕೆ ಪಾದಯಾತ್ರೆ ನಡೆಸಿದ್ದಾರೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿ ದ್ದಾರೆ. ಈ ಸಂಬಂಧ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ‌ ಅವರು, ಮೇಕೆದಾಟು ಯೋಜನೆಗೆ ಬೇಕಾದ ವಿಸ್ತೃತ ಯೋಜನಾ ವರದಿ ತಯಾರಿಸಲು ವಿಳಂಬ ಮಾಡಿತು.
ಸಕಾಲಕ್ಕೆ ಈ‌ ಹೊಣೆ ನಿಭಾಯಿಸಿದ್ದರೆ ಈಗ ಪಾದಯಾತ್ರೆ ಮಾಡುವ ಅಗತ್ಯವೇ‌ ಇರುತ್ತಿರಲಿಲ್ಲ ಎಂದರು. ಯೂಕ್ರೇನ್ ಯುದ್ಧ ಭೂಮಿಯಲ್ಲಿ
 
ಸಿಲುಕಿರುವ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದಕ್ಕೆ ಸಲಹೆ- ಸೂಚನೆ ನೀಡುವುದನ್ನು ಬಿಟ್ಟು‌ ಕಾಂಗ್ರೆಸ್​ನ ಸಿದ್ದರಾ ಮಯ್ಯ ಅವರಂತಹ ನಾಯಕರು ಬೀದಿಬದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುನಿಲ್​ ಕುಮಾರ್​ ವ್ಯಂಗ್ಯವಾಡಿದರು. ಇನ್ನೂ ಅತಂತ್ರರಾಗಿದ್ದ 3,500 ಭಾರತೀಯರನ್ನು ತಾಯ್ನಾಡಿಗೆ ಕರೆ ತಂದಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ಈ ಸಂದ ರ್ಭದಲ್ಲಿ ಭಾರತೀಯರೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕು. ಇದರಲ್ಲೂ ಪಕ್ಷ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದು ಬಿಜೆಪಿಗೆ ಗುದ್ದು