Select Your Language

Notifications

webdunia
webdunia
webdunia
webdunia

ಮಹದಾಯಿ ಪ್ರತಿಭಟನೆಗೆ ಬೆಚ್ಚಿ ಕಾಂಗ್ರೆಸ್, ಬಿಜೆಪಿ ಕಚೇರಿಗೆ ಭದ್ರತೆ

ಮಹದಾಯಿ ಪ್ರತಿಭಟನೆಗೆ ಬೆಚ್ಚಿ ಕಾಂಗ್ರೆಸ್, ಬಿಜೆಪಿ ಕಚೇರಿಗೆ ಭದ್ರತೆ
ಬೆಂಗಳೂರು , ಬುಧವಾರ, 27 ಡಿಸೆಂಬರ್ 2017 (10:19 IST)
ಬೆಂಗಳೂರು: ಮಹದಾಯಿ ಹೋರಾಟಗಾರರ ಪ್ರತಿಭಟನೆಯ ಕಾವಿಗೆ ರಾಜಕೀಯ ಪಕ್ಷಗಳು ನಿಜಕ್ಕೂ ಬೆಚ್ಚಿಬಿದ್ದಿವೆ. ಬೆಂಗಳೂರಿನ ಬಿಜೆಪಿ ಕಚೇರಿಯೆದುರು ಪ್ರತಿಭಟನೆ ನಡೆಸುತ್ತಿರುವ ರೈತರು ರಾಜಭವನದ ಕಡೆಗೆ ಕಾಲ್ನಡಿಗೆಯಲ್ಲಿ ತೆರಳಿ ರ್ಯಾಲಿ ನಡೆಸಲಿದ್ದಾರೆ.
 

ಇದರಿಂದಾಗಿ ಬೆಂಗಳೂರಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿ, ರಾಜಭವನ ಮತ್ತಿತರ ಕಡೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಇದೀಗ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯೆದುರು ಸಭೆ ನಡೆಸುತ್ತಿರುವ ರೈತರು ಕೆಲವೇ ಕ್ಷಣಗಳಲ್ಲಿ ರ್ಯಾಲಿ ಹೊರಡಲಿದ್ದಾರೆ. ಪಾದ ಯಾತ್ರೆ ಮೂಲಕ ರಾಜಭವನಕ್ಕೆ ಆಗಮಿಸಲಿರುವ ಪ್ರತಿಭಟನಾಕಾರರು ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಛೋಟಾ ಶಕೀಲ್ ನನ್ನು ತಿಹಾರ್ ಜೈಲಿನಲ್ಲೇ ಮುಗಿಸಲು ದಾವೂದ್ ಇಬ್ರಾಹಿಂ ಸಂಚು?!