Select Your Language

Notifications

webdunia
webdunia
webdunia
webdunia

ಮಹದಾಯಿ ಪ್ರತಿಭಟನೆಗೆ ಬೆದರಿದ ಬಿಜೆಪಿ

ಮಹದಾಯಿ ಪ್ರತಿಭಟನೆಗೆ ಬೆದರಿದ ಬಿಜೆಪಿ
ಬೆಂಗಳೂರು , ಮಂಗಳವಾರ, 26 ಡಿಸೆಂಬರ್ 2017 (11:22 IST)
ಬೆಂಗಳೂರು: ಮಹದಾಯಿ ನೀರು ವಿವಾದ ಪರಿಹರಿಸಲು ಹೋಗಿ ಇದೀಗ ರಾಜ್ಯ ಬಿಜೆಪಿ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳಲಾಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ.
 

ಮಹದಾಯಿ ವಿವಾದ ಬಗೆ  ಹರಿಸುವುದಾಗಿ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಜತೆ ಮಾತುಕತೆ ನಡೆಸಿದ್ದ ಬಿಜೆಪಿ ನಾಯಕರು ರೈತರಿಗೆ ಭರವಸೆ ಕೊಟ್ಟಿದ್ದರು. ಆದರೆ ಭರವಸೆ ಉಳಿಸಿಕೊಳ್ಳಲಾಗದ ಬಿಜೆಪಿ ನಾಯಕರ ವಿರುದ್ಧ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಬಿಜೆಪಿ ಕಚೇರಿ ಎದುರು ಧರಣಿ ಕೂತಿರುವ ರೈತರು ರಾಜ್ಯ ನಾಯಕರು ಬಂದು ಸ್ಪಷ್ಟ ಪರಿಹಾರ ಕೊಡುವವರೆಗೂ ನಾವು ಪ್ರತಿಭಟನೆ ನಿಲ್ಲಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ರೈತರ ಪ್ರತಿಭಟನೆಗೆ ಬೆದರಿರುವ ಬಿಜೆಪಿ ನಾಯಕರು ಇಂದಿನ ಕೋರ್ ಕಮಿಟಿ ಸಭೆಯನ್ನು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮನೆಯಲ್ಲೇ ನಡೆಸುತ್ತಿದ್ದಾರೆ. ಆದರೆ ರೈತರು ಮಾತ್ರ ಸಭೆ ಎಲ್ಲೇ ನಡೆಸಲಿ, ನಾವು ಮಾತ್ರ ಯಡಿಯೂರಪ್ಪ ಸಮಸ್ಯೆ ಪರಿಹರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳುವವರೆಗೂ ಪ್ರತಿಭಟನೆ ಕೈ ಬಿಡಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

107 ರ ಅಜ್ಜಿಗೆ ರಾಹುಲ್ ಗಾಂಧಿ ಕಂಡ್ರೆ ಇಷ್ಟವಂತೆ! ಕಾರಣ ಏನು ಗೊತ್ತಾ?!