Select Your Language

Notifications

webdunia
webdunia
webdunia
webdunia

ಬಿಜೆಪಿ ವಿರುದ್ಧ ಮಹದಾಯಿ ಹೋರಾಟಗಾರರ ಆಕ್ರೋಶ; ಹೋರಾಟಗಾರರು ಹೇಳಿದ್ದೇನು ಗೊತ್ತಾ...?

ಬಿಜೆಪಿ ವಿರುದ್ಧ ಮಹದಾಯಿ ಹೋರಾಟಗಾರರ ಆಕ್ರೋಶ; ಹೋರಾಟಗಾರರು ಹೇಳಿದ್ದೇನು ಗೊತ್ತಾ...?
ಬೆಂಗಳೂರು , ಸೋಮವಾರ, 25 ಡಿಸೆಂಬರ್ 2017 (08:40 IST)
ಬೆಂಗಳೂರು: ಮಹದಾಯಿ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ಮುಂದುವರಿದಿದ್ದು, ಮಹದಾಯಿ ಹೋರಾಟಗಾರರು ಬಿಜೆಪಿ ವಿರುದ್ಧ ಸಿಡಿದೆದಿದ್ದಾರೆ.


ರಾತ್ರಿಯಿಡಿ ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದ ಹೋರಾಟಗಾರರು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯುರಪ್ಪ ವಿರುದ್ಧ  ಆಕ್ರೋಶಗೊಂಡಿದ್ದಾರೆ. ‘ನ.15 ರಂದು ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾಗ ಬಿಎಸ್ ಯಡಿಯೂರಪ್ಪ ಅವರು ಮಹದಾಯಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು, ಹಾಗೆ ಸಮಸ್ಯೆ ಬಗೆಹರಿಸಲು 20 ದಿನ ಕಾಲಾವಕಾಶ ಕೇಳಿದ್ದರು. ಆದರೆ ಈವರೆಗೆ ಅವರು ಭರವಸೆ ಈಡೇರಿಸುವ ಕೆಲಸ ಮಾಡಿಲ್ಲ.


ಕೇಂದ್ರ, ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಈಗಲಾದರೂ ಸಮಸ್ಯೆ ಬಗೆಹರಿಸಿ. ರೈತರ ಜೀವನದ ಜೊತೆ ಚೆಲ್ಲಾಟ ಆಡಬೇಡಿ, ಇದರಿಂದ ನಿಮ್ಮ ವಂಶ ಸರ್ವನಾಶವಾಗುತ್ತದೆ’ ಎಂದು ಬಿಜೆಪಿ ವಿರುದ್ಧ ರೈತ ಮುಖಂಡ ಪಂಚನಗೌಡ ದ್ಯಾಮನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ದಿನದ ಹಿಂದೆ ಸರಿ ಇದ್ದ ಮಗು ದಿಢೀರನೆ ಸತ್ತಿದ್ದು ಹೇಗೆ…?