Select Your Language

Notifications

webdunia
webdunia
webdunia
webdunia

ವಿಷಹಾರದಿಂದ ಒಂದೇ ಕುಟುಂಬದ ಮೂವರು ಸಾವು

ವಿಷಹಾರದಿಂದ ಒಂದೇ ಕುಟುಂಬದ ಮೂವರು ಸಾವು
bengaluru , ಮಂಗಳವಾರ, 13 ಜುಲೈ 2021 (14:52 IST)
ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ ಸಂಭವಿಸಿದೆ.
ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದ ನಿವಾಸಿಗಳಾದ ತಿಪ್ಪಾನಾಯ್ಕ್, ಪತ್ನಿ ಸುಧಾಬಾಯಿ, 75 ವರ್ಷದ ವೃದ್ಧೆ ಗುಂಡಿಬಾಯಿ ಮೃತಪಟ್ಟರೆ, ರಾಹುಲ್ (18) ಮತ್ತು ರಮ್ಯಾ (16) ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ರಾತ್ರಿ ರಾಗಿ ಮುದ್ದೆ, ಕಾಳಿನ ಸಾಂಬರ್ ಸೇವಿಸಿದ್ದ ಐವರು ಅಸ್ವಸ್ಥಗೊಂಡಿದ್ದು, ಕೂಡಲೇ 5 ಮಂದಿಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟರೆ,  ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರು ದಾವಣಗೆರೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆ ಹಾನಿ ತಡೆಗೆ ಬಿಬಿಎಂಪಿ ಸಿದ್ಧತೆ