Publish Date: Sat, 27 Feb 2021 (09:18 IST)
Updated Date: Sat, 27 Feb 2021 (09:20 IST)
ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಇಂದು ಜನ್ಮದಿನದ ಸಂಭ್ರಮ. ಹುಟ್ಟು ಹಬ್ಬ ಪ್ರಯುಕ್ತ ಸಿಎಂ ಇಂದು ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಇನ್ನು, ಬಿಎಸ್ ವೈ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಟ್ವಿಟರ್ ಮೂಲಕ ಶುಭ ಕೋರಿದ್ದಾರೆ. ಯಡಿಯೂರಪ್ಪನವರು ನಮ್ಮ ಅತ್ಯಂತ ಹಿರಿಯ ನಾಯಕ. ತಮ್ಮ ಜೀವನವಿಡೀ ರೈತ ಪರ ಹೋರಾಟ ಮತ್ತು ಬಡವರ ಏಳಿಗೆಗಾಗಿ ಮುಡಿಪಿಟ್ಟಿದ್ದಾರೆ. ಅವರಿಗೆ ದೇವರು ಆಯುರಾರೋಗ್ಯಯ ಕೊಡಲಿ ಎಂದು ಮೋದಿ ಶುಭ ಹಾರೈಸಿದ್ದಾರೆ.