Webdunia - Bharat's app for daily news and videos

Install App

ಜನತೆಗೆ ಟೋಪಿ ಹಾಕುವುದೇ ಪ್ರಧಾನಿ ಮೋದಿ ಕಾಯಕ: ಓವೈಸಿ

Webdunia
ಬುಧವಾರ, 9 ಮೇ 2018 (13:20 IST)
ಪ್ರಧಾನಿ ಟೋಪಿ ಹಾಕುತ್ತ ತಿರುಗುತ್ತಾರೆ. ನಾನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ ಅಂತ ಹೇಳುತ್ತಾರೆ.ವಿಜಯ್ ಮಲ್ಯ ತಿಂದು ಓಡಿ ಹೋದರು.ಇನ್ನೊಬ್ಬ ಮೋದಿಯೂ ಸಹ ತಿಂದು ಓಡಿ ಹೋದರು.ಇದು ಎನು ಪ್ರಧಾನಿಯವರೇ? ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ. 
ಉಗಾರದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಅಸಾದುದ್ದಿನ್ ಓವೈಸಿ ಭಾಷಣ ಮಾಡಿ ಗಮನ ಸೆಳೆದರು. 3 ನೇ ಸ್ಥಾನದಲ್ಲಿ ಜೆಡಿಎಸ್ ಬರುತ್ತೆ ಅಂತ ಸಿದ್ದರಾಮಯ್ಯ ಮತ್ತು ಮೋದಿ ಹೇಳುತ್ತಾರೆ. ಆದರೆ, ಮೇ 15 ರಂದು ಯಾರು ಯಾವ ಸ್ಥಾನದಲ್ಲಿರುತ್ತಾರೆ ಎನ್ನುವುದು ಕಾದು ನೋಡಿ ಎಂದು ಗುಡುಗಿದರು.
 
ತ್ರಿವಳಿ ತಲಾಕ್ ರದ್ದತಿ ಬಿಲ್ ತೆಗೆದುಕೊಂಡು ಬಂದವರಿಗೆ ಲೋಕಸಭೆಯಲ್ಲಿಕಾಂಗ್ರೆಸ್ ಕೂಡ ಬಿಜೆಪಿಗೆ ಸಾಥ್ ನೀಡಿತು.
ನಮ್ಮ ಮಾತು ಕೇಳಲು ಅವರಿಬ್ಬರು ತಯಾರಿಲ್ಲ. ನಾನು ಮತ್ತು ತಮಿಳುನಾಡು ಸಂಸದರೊಬ್ಬರು ಇದಕ್ಕೆ ವಿರೋಧ ಮಾಡಿದ್ದೇವು.
 
ಜಮ್ಮುವಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಆಯಿತು. ಅತ್ಯಂತ ಹೀನಾಯವಾಗಿ ಅವಳನ್ನ ಹತ್ಯೆ ಮಾಡಲಾಯಿತು. ಬಿಜೆಪಿ ಪಾರ್ಟಿಯ ಮಿನಿಸ್ಟರ್ ಒಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದಾಗ ಪ್ರತಿಭಟನೆ ಮಾಡಿದ್ರು. ಹೊಸ ತಲೆಮಾರಿನವರ ಮುಂದೆ ನಿಮ್ಮ ನಾಟಕಗಳು ನಡೆಯುವುದಿಲ್ಲ. 
 
ನಾನು ಮೊದಲ ಬಾರಿಗೆ ನಿಮ್ಮ ಊರಿಗೆ ಬಂದಿದ್ದೇನೆ.ನನಗೆ ಅಲ್ಲಾ  ಎಲ್ಲಿಯವರೆಗೂ ಪ್ರೇರೆಪಿಸುತ್ತಾನೊ ಅಲ್ಲಿಯವರೆಗೂ ನಾನು ಬಡವರ, ಹಿಂದುಳಿದವರ, ಅನ್ಯಾಯಕ್ಕೊಳಗಾದವರ, ಧ್ವನಿಯಾಗಿರುತ್ತೇನೆ. ನಾನು ಗಲ್ಲಿ ಗಲ್ಲಿ ತಿರುಗಿ ಅವರ ಬಳಿ ತೆರಳಿ ಅವರ ಧ್ವನಿಯಾಗುತ್ತೇನೆ ಎಂದು ಓವೈಸಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಮಳೆಗಾಗಿ ಕಾಯುತ್ತಿದ್ದರೆ ಇಂದಿನ ಹವಾಮಾನ ತಪ್ಪದೇ ಗಮನಿಸಿ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

ಮುಂದಿನ ಸುದ್ದಿ
Show comments