Select Your Language

Notifications

webdunia
webdunia
webdunia
webdunia

ಸಚಿವ ಆದಿತ್ಯ ಠಾಕ್ರೆಗೆ ಹೀಗೆ ಕರೆದು ಶಿವಸೇನೆಯ ಕೆಂಗಣ್ಣಿಗೆ ಗುರಿಯಾದ ವ್ಯಕ್ತಿ

ಸಚಿವ ಆದಿತ್ಯ ಠಾಕ್ರೆಗೆ ಹೀಗೆ ಕರೆದು ಶಿವಸೇನೆಯ ಕೆಂಗಣ್ಣಿಗೆ ಗುರಿಯಾದ ವ್ಯಕ್ತಿ
ಮುಂಬೈ , ಶುಕ್ರವಾರ, 17 ಜುಲೈ 2020 (08:49 IST)
ಮುಂಬೈ : ಮಹಾರಾಷ್ಟ್ರದ ಪ್ರವಾಸೋದ್ಯಮ ಇಲಾಖೆ ಸಚಿವ ಆದಿತ್ಯ ಠಾಕ್ರೆಯನ್ನು ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ‘ಬೇಬಿ ಪೆಂಗ್ವಿನ್’ ಎಂದು ಕರೆದು ವ್ಯಕ್ತಿಯೊಬ್ಬ ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಪ್ರಧಾನಿ ಮೋದಿ ಫಾಲೋವರ್ ಆಗಿರುವ ಸಮೀತ್ ಥಕ್ಕರ್ ಎಂಬ ವ್ಯಕ್ತಿ  ಟ್ವೀಟರ್ ನಲ್ಲಿ ಸಚಿವ ಆದಿತ್ಯ ಠಾಕ್ರೆಗೆ ಈ ಪದ ಬಳಕೆ ಮಾಡಿದ್ದು, ಶಿವಸೇನೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಶಿವಸೇನೆಯ ಯುವ ಸೇನಾ ವಿಭಾಗದ ಧರ್ಮೇಂದ್ರ ಮಿಶ್ರಾ ವಿಪಿ ರೋಡ್ ಪೊಲೀಸ್ ಠಾಣೆಯಲ್ಲಿ ಸಮೀತ್ ಥಕ್ಕರ್ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಇದಕ್ಕೆ ಜಗ್ಗದ ಸಮೀತ್ ಥಕ್ಕರ್ ಟ್ವೀಟ್ ಡಿಲೀಟ್ ಮಾಡುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೀಕರ್ ನೀಡಿದ್ದ ಅನರ್ಹತೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಚಿನ್ ಪೈಲಟ್