Select Your Language

Notifications

webdunia
webdunia
webdunia
webdunia

ಮಳೆ ಆರ್ಭಟಕ್ಕೆ ಮತ್ತೆ ಅಕ್ಷರಶಃ ನಲುಗಿದ ಜನರು!

ಮಳೆ ಆರ್ಭಟಕ್ಕೆ ಮತ್ತೆ ಅಕ್ಷರಶಃ ನಲುಗಿದ ಜನರು!
ಚಿಕ್ಕೋಡಿ , ಸೋಮವಾರ, 21 ಅಕ್ಟೋಬರ್ 2019 (17:44 IST)
ನೆರೆ ಹಾವಳಿಯಿಂದ ಬದುಕು ಕಳೆದುಕೊಂಡ ಉತ್ತರ ಕರ್ನಾಟಕದ ಜನತೆ ಮತ್ತೆ ಸುರಿಯುತ್ತಿರುವ ಧಾರಾಕಾರ ಮಳೆಗೆ ತತ್ತರಿಸಿದ್ದಾರೆ.

ಬೆಳಗಾವಿ ಜಿಲ್ಲೆಯಾದ್ಯಾಂತ ಭಾರಿ ಪ್ರಮಾಣದ ಮಳೆಯಾಗಿದ್ದು, ರಸ್ತೆ ಸಂಚಾರ ಖಡಿತಗೊಂಡಿದೆ. ಸಂಕೇಶ್ವರ ನಗರವಂತೂ ಮಳೆಯ ಆರ್ಭಟಕ್ಕೆ ಅಕ್ಷರಶಃ ನಲುಗಿಹೋಗಿದೆ.

ಉತ್ತರ ಕರ್ನಾಟಕದ ಜನತೆ ಕೈಯಲ್ಲಿ ಜೀವ ಹಿಡಿದು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಮಳೆಯಿಂದಾಗಿ ಕೆಲವೆಡೆ ರಸ್ತೆ, ಸೇತುವೆಗಳು ಸಂಪೂರ್ಣ ಮುಳುಗಿವೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದ್ದು, ನದಿ ತಟದ ಗ್ರಾಮಸ್ಥರು ಗಂಟುಮೂಟೆ ಕಟ್ಟುವಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವಾಣಿವಿಲಾಸ ಭರ್ತಿ – ಬೀದಿಗೆ ಬಿದ್ದ ಸುಡುಗಾಡು ಸಿದ್ಧರು