Publish Date: Fri, 28 Dec 2018 (18:48 IST)
Updated Date: Fri, 28 Dec 2018 (18:50 IST)
ರಾಜಕೀಯ ಮುಖಂಡ ಹಾಗೂ ಕೆಎಲ್ ಇ ಸಂಸ್ಥೆ ಮುಖ್ಯಸ್ಥ ಪ್ರಭಾಕಾರ ಕೋರೆ ಒಡೆತನದ ಕಾರ್ಖಾನೆಗೆ ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಬೂದಿ ಹಾಗೂ ಕೆಮಿಕಲ್ ನೀರು ಬಿಡುತ್ತಿರುವ ಹಿನ್ನೆಲೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಜನರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಡ್ರಾಂವ ಗ್ರಾಮದಲ್ಲಿರುವ ಶಿವಶಕ್ತಿ ಶುಗರ್ಸ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗಿದೆ.
ರಾಯಬಾಗ ತಾಲೂಕಿನ ಯಡ್ರಾಂವ್ ಗ್ರಾಮದ ಜನರು, ಪ್ರಭಾಕರ ಕೋರೆ ಒಡೆತನದ ಶಿವಶಕ್ತಿ ಶುಗರ್ಸ ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕೋರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬು, ಮನೆಗಳ ಮೇಲೆ, ಗ್ರಾಮದಲ್ಲಿ ಬೂದಿ, ಕೆಮಿಕಲ್ ನೀರು ಬಿಡುತ್ತಿರುವ ಹಿನ್ನೆಲೆ ಪ್ರತಿಭಟನೆ ನಡೆದಿದೆ.