Select Your Language

Notifications

webdunia
webdunia
webdunia
webdunia

ಈ ಸರ್ಕಾರ ತೆಗೆಯಬೇಕೆಂದು ಜನ ತೀರ್ಮಾನ ಮಾಡಿದ್ದಾರೆ- ಡಿಕೆಶಿ

ಈ ಸರ್ಕಾರ ತೆಗೆಯಬೇಕೆಂದು ಜನ ತೀರ್ಮಾನ ಮಾಡಿದ್ದಾರೆ- ಡಿಕೆಶಿ
bangalore , ಶನಿವಾರ, 28 ಜನವರಿ 2023 (15:01 IST)
ಸರ್ಕಾರದ ವಿರುದ್ಧ ನಾವೇನು ಅಸ್ತ್ರ ಮಾಡುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
 
ಜನ ಈ ಸರ್ಕಾರ ತೆಗೆಯಬೇಕೆಂದು ತೀರ್ಮಾನ ಮಾಡಿದ್ದಾರೆ.ದಿನಾ ಜಾಹೀರಾತು ನೀಡ್ತಿದಾರೆ.ಕಳೆದ ಬಾರಿಯ ಬಜೆಟ್ ಜಾರಿಗೆ ಬಂದಿದ್ಯಾ,ಯಾವುದಾದ್ರು ಈಡೇರಿಸಿದ್ದಾರಾ... ಹಿಂದೆ ಕೊಟ್ಟ ಮಾತು ಈಡೇರಿದ್ಯಾ, ಜನಕ್ಕೆ ಮುಟ್ಟಿದ್ಯಾ...ಬರೀ ಭ್ರಷ್ಟಾಚಾರ ನಡೆಯುತ್ತಿದೆ.ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ.ಬೆಂಗಳೂರು, ಸಿಕ್ಕಿಂ ವಿವಿಯಲ್ಲಿ ಏನಾಗ್ತಿದೆ.ರಸ್ತೆಯಲ್ಲಿ 30,50 ಸಾವಿರ, ಲಕ್ಷಕ್ಕೆ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ.ಕಷ್ಟ ಪಟ್ಟು  ಓದಿದ ಮಕ್ಕಳ ಪರಿಸ್ಥಿತಿ ಏನಾಗಬೇಕು.ಇದೇನು ಸರ್ಕಾರನಾ..? ಮೈಸೂರಿನಲ್ಲಿ ಏನೇನಾಗಿದೆ.ಯಾವಾವ ಕೇಸ್ ಹೇಗೆ ವರ್ಗಾವಣೆ ಮಾಡಿದ್ರು.ಇದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಆ ಬಗ್ಗೆ ಆಮೇಲೆ ಮಾತಾಡ್ತಿನಿ ಎಂದು ಡಿಕೆಶಿ ಹೇಳಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಯಲಹಂಕ ವಲಯದಲ್ಲಿ ಮಾಂಸ ಮಾರಾಟ ಮಾಡದಂತೆ ಬಿಬಿಎಂಪಿ ಆದೇಶ