ಅನೈತಿಕ ಸಂಭಂದಕ್ಕೆ ಮಗನನ್ನು ಬಲಿ ಕೊಟ್ಟ ಪಾಪಿ ತಾಯಿ

Webdunia
ಭಾನುವಾರ, 22 ಜುಲೈ 2018 (20:08 IST)
ತಾಯಿ ಅಂದರೆ ತ್ಯಾಗಮಹಿ ಮಕ್ಕಳಿಗೋಸ್ಕರ ಸರ್ವಸ್ವ ತ್ಯಾಗ ಮಾಡುವ  ಕರುಣಾಮಹಿ ಅಂತೆಲ್ಲಾ, ತಾಯಿಗೆ ಉನ್ನತ ಸ್ಥಾನವನ್ನು ನೀಡಿರುವುದು ನಮ್ಮ ಸಂಪ್ರದಾಯ. ಆದರೆ ಇಲ್ಲೊಬ್ಬ ತಾಯಿ ಕೇವಲ ತನ್ನ ಕಾಮದ ಆಸೆ ತೀರಿಸಿಕಳ್ಳುವುದಕ್ಕೋಸ್ಕರ   ತನ್ನ ಒಡಲಲ್ಲಿ ಜನಿಸಿದ ಕಂದಮ್ಮನನ್ನು  ಕತ್ತು ಹಿಸುಕಿ ಕೊಲೆ ಮಾಡಿ. ತಾಯಿ ಅನ್ನುವ ಪವಿತ್ರ ಪದಕ್ಕೆ  ಮಸಿ  ಬಳಿಯುವ ಕೆಲಸ ಮಾಡಿರುವ ಘಟನೆ  ನಡೆದಿದೆ.  

 
ಚಿಕ್ಕಬಳ್ಳಾಪುರದಲ್ಲಿ ತಾಯಿಯೊಬ್ಬಳು ತನ್ನ ಅನೈತಿಕ ಸಂಬಂಧ ಮರೆಮಾಚುವ ನಿಟ್ಟಿನಲ್ಲಿ ಹೆತ್ತ ಮಗನನ್ನೆ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರಕಾಶ್ ಮತ್ತು ಭವಾನಿ ಅಲಿಯಾಸ್ ಸುಕನ್ಯ ಎಂಬುವರಿಗೆ ಮದುವೆಯಾಗಿ ಹತ್ತು ವರ್ಷಗಳು ಕಳೆದಿರುತ್ತದೆ. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಗಂಡುಮಕ್ಕಳಿವೆ. ಒಬ್ಬ ಮಗ ಪುನೀತ್ 9 ವರ್ಷ, ಸುದೀಪ್ 6 ವರ್ಷದ ಮಕ್ಕಳಿದ್ದಾರೆ.  ಪ್ರಕಾಶ್ ರವರು  ಸಪ್ತಗಿರಿ ಎಂಬ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾರೆ. ಆದರೆ  ಭವಾನಿ ಅಲಿಯಾಸ್ ಸುಕನ್ಯ ಹೆಚ್ಚಿನ ಸಂಪಾದನೆಗೋಸ್ಕರ  ಗಾರೆಕೆಲಸ ಮಾಡಲು ಮೂರ್ತಿ ಎಂಬಾತನ ಜೊತೆಯಲ್ಲಿ ಹೋಗುತ್ತಿರುತ್ತಾಳೆ.

ಸುಕನ್ಯ ಮೂರ್ತಿಯ ಜೊತೆ ಅನೈತಿಕ  ಸಂಭಂದ ಬೆಳಸಿಕೊಂಡು ಗೌಪ್ಯವಾಗಿ ನಡೆಸಿಕೊಂಡು ಬಂದಿರುತ್ತಾಳೆ. ಒಂದು ದಿನ ಗಂಡ ಇಲ್ಲದೆ ಇರುವ ಸಮಯ ನೋಡಿಕೊಂಡು ತನ್ನ ಪ್ರಿಯಕರ ಮೂರ್ತಿಯನ್ನು ಮನೆಗೆ ಕರೆಸಿಕೊಂಡು  ತನ್ನ ಕಾಮದ ಚೆಲ್ಲಾಟದಲ್ಲಿ ತೊಡಗಿರುವ ದೃಶ್ಯವನ್ನು ಕಣ್ಣಾರೆ ಕಂಡ ತನ್ನ ಎರಡನೇ ಮಗ ಸದೀಪ್ ನನ್ನು  ತನ್ನ ಅಕ್ರಮ ಸಂಭಂದಿ ಮೂರ್ತಿ ಯೊಂದಿಗೆ ಸೇರಿ ಕತ್ತು ಹಿಸುಕಿ ಉಸಿರುಗಟ್ಟಿಸಿ  ಸಾಯಿಸಿಯೇ ಬಿಟ್ಟಿದ್ದಾರೆ.  ಈ ಕುರಿತು ಚಿಂತಾಮಣಿ  ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತನಿಖೆ ಕೈಗೆತ್ತಿಕೊಂಡ ಚಿಂತಾಮಣಿ  ನಗರ ಪೊಲೀಸ್ ಇನ್ಸ್ಪೆಕ್ಟರ್ ಪಿ ಬಿ ಹನುಮಂತಪ್ಪ ಮತ್ತು  ಶಿಡ್ಲಘಟ್ಟ  ಗ್ರಾಮಾಂತರ ಠಾಣೆಯ ಸಭ್ ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments