Webdunia - Bharat's app for daily news and videos

Install App

ಗ್ರಾಮದೇವತೆ ಜಾತ್ರೆಯಲ್ಲಿ ಪಂಚಾಯಿತಿ ಸದಸ್ಯ ಕೊಲೆಯಾಗಿದ್ದೇಕೆ?

Webdunia
ಮಂಗಳವಾರ, 19 ಫೆಬ್ರವರಿ 2019 (16:47 IST)
ಆ ಊರಲ್ಲಿ ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು ಉತ್ಸವ ಮಾಡುವ ಪದ್ಧತಿಯಿದೆ. ಹೀಗೆ ದೇವಾಲಯದ ಬಾಗಿಲು ತೆಗೆದಾಗ ವಿಶೇಷ ಜಾತ್ರೆ ನಡೆಯುತ್ತಿರುವಾಗಲೇ ಪಂಚಾಯಿತಿ ಸದಸ್ಯನೊಬ್ಬ ಭೀಕರವಾಗಿ ಕೊಲೆಯಾಗಿಹೋಗಿದ್ದಾನೆ.

ಹಳೇ ದ್ವೇಷ ಹಿನ್ನೆಲೆ, ಉತ್ಸವದಲ್ಲಿ ಗಲಾಟೆ ತೆಗೆದು ಗ್ರಾಪಂ ಸದಸ್ಯನ ಭೀಕರ ಹತ್ಯೆ ಮಾಡಲಾಗಿದ್ದು, ಘಟನೆಯಲ್ಲಿ  ನಾಲ್ವರಿಗೆ ಗಾಯಗಳಾಗಿವೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಿಮ್ಮೇಗೌಡ(50) ಕೊಲೆಯಾದ ಗ್ರಾ.ಪಂ ಸದಸ್ಯನಾಗಿದ್ದಾನೆ.  

ಗ್ರಾಮದೇವತೆ ದೇವೀರಮ್ಮ ಉತ್ಸವದ ವೇಳೆ ಘಟನೆ ನಡೆದಿದೆ. ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು ಉತ್ಸವ ಮಾಡುವ ವಿಶೇಷ ಜಾತ್ರೆಯಲ್ಲಿ, ದೇವಿಯ ಉತ್ಸವದ ಮೆರವಣಿಗೆ ವೇಳೆ ಜಗಳ ತೆಗೆದು ಏಕಾಏಕಿ
ತಿಮ್ಮೇಗೌಡರಿಗೆ ಲಾಂಗು, ಮಚ್ಚಿನಿಂದ ಹಲ್ಲೆ ಮಾಡಿ ಬಳಿಕ ಚಾಕು ಇರಿದು ಕೊಲೆ ಮಾಡಲಾಗಿದೆ.

ಬಿಡಿಸಲು ಬಂದ ನಾಲ್ಕು ಜನರಿಗೂ ಗಂಭೀರ ಗಾಯಗಳಾಗಿವೆ. ವಿನಾಯಕ, ಗೌತಮ್, ಮಹೇಶ್, ಸ್ವಾಮೀಗೌಡಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಿಮ್ಮೇಗೌಡರ ತಮ್ಮನ ಮಗಳನ್ನು ಅದೇ ಗ್ರಾಮದ ಮದನ್ ಎಂಬೋರು ಪ್ರೇಮ ವಿವಾಹ ವಾಗಿದ್ರು. ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯ ಪಂಚಾಯಿತಿ ಮಾಡಿಸಿದ್ದರು ತಿಮ್ಮೇಗೌಡ. ಆಗ ವಿಚ್ಛೇದನ ನೀಡುವಂತೆ ಪಂಚಾಯಿತಿಯಲ್ಲಿ ತೀರ್ಮಾನವಾಗಿತ್ತು.

ಈ ಹಳೇ ದ್ವೇಷದ ಹಿನ್ನೆಲೆಯಿಂದ ಉತ್ಸವದ ವೇಳೆ ಗಲಾಟೆ ತೆಗೆದು ಕೊಲೆ ಮಾಡಲಾಗಿದೆ. ದೇವೇಗೌಡ, ಯೋಗೇಗೌಡ, ಮದನ, ಕುಮಾರ, ಚಂದು ಎಂಬೋರಿಂದ ಕೊಲೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿ, ಎಪಿಎಂಸಿ ಸದಸ್ಯ ಸ್ವಾಮೀಗೌಡ ಹೇಳಿಕೆ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments