Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ವಿರುದ್ಧ ಪಿ.ಐ. ಎಲ್.

ಕಾಂಗ್ರೆಸ್ ವಿರುದ್ಧ ಪಿ.ಐ. ಎಲ್.
ಬೆಂಗಳೂರು , ಮಂಗಳವಾರ, 11 ಜನವರಿ 2022 (16:43 IST)
ನಮ್ಮ ನೀರು ನಮ್ಮ ಹಕ್ಕು” ಹೆಸರಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
 
ಬೆಂಗಳೂರು ನಿವಾಸಿ ಎ.ವಿ. ನಾಗೇಂದ್ರ ಪ್ರಸಾದ್ ಎಂಬುವರು ಈ ಅರ್ಜಿ ಸಲ್ಲಿಸಿದ್ದಾರೆ.
ದಿನೇ ದಿನೇ ಕೋವಿಡ್ ಸ್ಥಿತಿ ಬಿಗಡಾಯಿಸುತ್ತಿದೆ. ಈ ಮಧ್ಯೆ ಪಾದಯಾತ್ರೆಯಿಂದ ಕೋವಿಡ್ ಹಬ್ಬುವ ಸಾಧ್ಯತೆಯಿದೆ. ನಿರ್ಬಂಧವಿದ್ದರೂ ಕೆಪಿಸಿಸಿ ಪಾದಯಾತ್ರೆ ಮುಂದುವರಿಸಿದೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಪಾದಯಾತ್ರೆ ಮುಂದುವರಿಸದಂತೆ ಕಾಂಗ್ರೆಸ್ ಪಕ್ಷಕ್ಕೆ ನಿರ್ದೇಶನ ನೀಡುವಂತೆ ಸರ್ಕಾರ, ರಾಮನಗರ ಜಿಲ್ಲಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಯಾರಿಗೂ ಹೆದರುವುದಿಲ್ಲ