Select Your Language

Notifications

webdunia
webdunia
webdunia
webdunia

ಶಾಸಕರ ಅನರ್ಹತೆ ಶಿಫಾರಸ್ಸಿಗೆ ಆಕ್ರೋಶ

ಶಾಸಕರ ಅನರ್ಹತೆ ಶಿಫಾರಸ್ಸಿಗೆ ಆಕ್ರೋಶ
ಚಿಕ್ಕೋಡಿ , ಬುಧವಾರ, 13 ಫೆಬ್ರವರಿ 2019 (13:30 IST)
ಪಕ್ಷಾಂತರ ನಿಷೇಧ ಕಾಯಿದೆ ಅಡಿಯಲ್ಲಿ ನಾಲ್ಕು ಜನ ಶಾಸಕರ ಅನರ್ಹತೆಗೆ ಸಿ ಎಲ್ ಪಿ ಅಧ್ಯಕ್ಷ ಸಿದ್ದರಾಮಯ್ಯ ಶಿಫಾರಸ್ಸು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಸಿಎಲ್ಪಿ ಅಧ್ಯಕ್ಷರ ಕ್ರಮ ಖಂಡಿಸಿ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನಾಪತ್ತೆ ವಿಚಾರವಾಗಿ ಈಗ ಅವರನ್ನು ರೈತಸಂಘ ಬೆಂಬಲಿಸಿದೆ.

ಶಾಸಕ ಮಹೇಶ್ ಕುಮಠಳ್ಳಿ ಅವರೆಲ್ಲೂ ಹೋಗಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅವರಿಟ್ಟ ಬೇಡಿಕೆಗಳಿಗೆ ಸಮ್ಮಿಶ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದಾರೆ. ಜನಪ್ರತಿನಿಧಿ ಒಬ್ಬರು ಕ್ಷೇತ್ರದ ಜನಹಿತಕ್ಕಾಗಿ ಅಭಿವೃದ್ಧಿ ಕೇಳಿದರೆ ಶಾಸಕರನ್ನು ಅನರ್ಹಗೊಳಿಸುವದು ಸರಿ ಅಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಹಾಗೂ ಮೈತ್ರಿ ಸರಕಾರದ ಮುಖಂಡರ ವಿರುದ್ಧ ರೈತ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಜಾತ್ರೆಯಲ್ಲಿ ಚರಂಡಿಗೆ ಬಿದ್ದ ಎತ್ತಿನ ಬಂಡಿ; ಮುಂದೇನಾಯ್ತು?