Select Your Language

Notifications

webdunia
webdunia
webdunia
webdunia

ದೇವರ ಜಾತ್ರೆಯಲ್ಲಿ ಚರಂಡಿಗೆ ಬಿದ್ದ ಎತ್ತಿನ ಬಂಡಿ; ಮುಂದೇನಾಯ್ತು?

ದೇವರ ಜಾತ್ರೆಯಲ್ಲಿ ಚರಂಡಿಗೆ ಬಿದ್ದ ಎತ್ತಿನ ಬಂಡಿ; ಮುಂದೇನಾಯ್ತು?
ಶಿವಮೊಗ್ಗ , ಬುಧವಾರ, 13 ಫೆಬ್ರವರಿ 2019 (13:07 IST)
ದೇವರ ರಥೋತ್ಸವದ ಸಂದರ್ಭದಲ್ಲಿ ಪಾನಕದ ಎತ್ತಿನಗಾಡಿಯೊಂದು ಚರಂಡಿಗೆ ಬಿದ್ದ ಘಟನೆ ನಡೆದಿದೆ.

ಬೀರೂರಿನ ಗ್ರಾಮ ದೇವತೆ  ಅಂತರಘಟ್ಟಮ್ಮ ದೇವರ ರಥೋತ್ಸವದ ವೇಳೆ ಪಾನಕದ ಎತ್ತಿನ ಗಾಡಿಯೊಂದು ಚರಂಡಿಗೆ ಉರುಳಿ ಬಿದ್ದ ಪರಿಣಾಮ ಓರ್ವನ ಪರಿಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೀರೂರು ಪಟ್ಟಣದ ಶಿವಾಜಿನಗರದ ಆಲದಮರದ ತಿರುವಿನಲ್ಲಿ ಘಟನೆ ನಡೆದಿದ್ದು, ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಥೋತ್ಸವದ ವೇಳೆ ಸುಮಾರು 50ಕ್ಕೂ ಹೆಚ್ಚು ಪಾನಕದ ಗಾಡಿಗಳನ್ನು ಓಡಿಸಲಾಯಿತು.

ಈ ವೇಳೆ ಒಂದು ಎತ್ತಿನಗಾಡಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಈ ವೇಳೆ  ಚಂದ್ರೋಜಿರಾವ್, ತಿಮ್ಮಣ್ಣ ಎಂಬುವರ ತಲೆಗೆ ತೀವ್ರ ಪ್ರಮಾಣದಲ್ಲಿ ಪೆಟ್ಟಾದ ಪರಿಣಾಮ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಠಾಣೆಯಲ್ಲೇ ಮದ್ವೆ ಆದ ಲವರ್ಸ್!