Select Your Language

Notifications

webdunia
webdunia
webdunia
webdunia

ಲವ್ ಮ್ಯಾರೇಜ್ ಗೆ ವಿರೋಧ : ನಾಲ್ಕು ಜನರ ಕೊಲೆ

ಲವ್ ಮ್ಯಾರೇಜ್ ಗೆ ವಿರೋಧ : ನಾಲ್ಕು ಜನರ ಕೊಲೆ
ರಾಯಚೂರು , ಭಾನುವಾರ, 12 ಜುಲೈ 2020 (18:56 IST)
ಯುವಕ ಹಾಗೂ ಯುವತಿಯ ಪ್ರೇಮ ವಿವಾಹದ ಕಾರಣಕ್ಕೆ ಹುಡುಗನ ಮನೆಯ ನಾಲ್ವರು ಕೊಲೆಯಾಗಿದ್ದಾರೆ.

ಮಂಜುಳಾ ಹಾಗೂ ಮೌನೇಶ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರ ಮದುವೆಗೆ ಮಂಜುಳಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಮದುವೆಯಾಗಿದ್ದ ಜೋಡಿ ಸಂಸಾರ ನಡೆಸುತ್ತಿತ್ತು.

ಈ ನಡುವೆ ಮಂಜುಳಾ ಕಡೆಯವರಾದ ಫಕೀರಪ್ಪ ಹಾಗೂ ಅಂಬಣ್ಣ ಸೇರಿದಂತೆ ಮೂವರು ಬಂದು, ಹುಡುಗ ಮೌನೇಶನ ಮನೆ ಮಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಘಟನೆಯಲ್ಲಿ ನಾಲ್ವರು ಕೊಲೆಯಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ರಾಯಚೂರಿನ ಸಿಂಧನೂರು ಸುಕಾಲಪೇಟೆಯಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ 10 ಜಿಲ್ಲೆಗಳಲ್ಲಿ ಕಠಿಣ ಲಾಕ್ ಡೌನ್?