Select Your Language

Notifications

webdunia
webdunia
webdunia
webdunia

ಸೋಂಕಿತನ ಶವ ಹೂಳಲು ವಿರೋಧ: ನಿಗೂಢ ಸ್ಥಳದಲ್ಲಿ ಅಂತ್ಯ ಸಂಸ್ಕಾರ

ಸೋಂಕಿತನ ಶವ ಹೂಳಲು ವಿರೋಧ: ನಿಗೂಢ ಸ್ಥಳದಲ್ಲಿ ಅಂತ್ಯ ಸಂಸ್ಕಾರ
ಕೊಪ್ಪಳ , ಶುಕ್ರವಾರ, 10 ಜುಲೈ 2020 (16:23 IST)
ಕೊರೊನಾ ಸೋಂಕಿತನ ಶವ ಹೂಳಲು ಸ್ವಗ್ರಾಮದಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ.

ಕೊಪ್ಪಳ ಜಿಲ್ಲೆಯ ಕೊರೊನಾ ಸೋಂಕಿನಿಂದ‌ ಮೃತಪಟ್ಟಿದ್ದ ಗಂಗಾವತಿ ತಾಲೂಕಿನ ಹಿರೇಜಂತಕಲ್ ನಿವಾಸಿಯ ಅಂತ್ಯ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಮೃತ ದೇಹವನ್ನು ಸಂಗಾಪುರ ಗ್ರಾಮಕ್ಕೆ ಸಾಗಿಸಲಾಯಿತು.

ಆದರೆ ಅಲ್ಲೂ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಮಧ್ಯರಾತ್ರಿ ನಡೆದಿದೆ.

ಸಾರ್ವಜನಿಕರಿಗೆ ಎಷ್ಟೇ ತಿಳಿ ಹೇಳಲು ಯತ್ನಿಸಿದರೂ ಜನ ಮಾತ್ರ ಅಧಿಕಾರಿಗಳ ಸಮಜಾಯಿಷಿಗೆ ಒಪ್ಪಲಿಲ್ಲ. ಇದರಿಂದ ವಿಚಲಿತರಾದ ಅಧಿಕಾರಿಗಳು ಮೃತ ದೇಹವನ್ನು ನಿಗೂಢ ಸ್ಥಳಕ್ಕೆ ಸ್ಥಳಾಂತರಿಸಿದರು. ಮಧ್ಯರಾತ್ರಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದವ ಅರೆಸ್ಟ್