Webdunia - Bharat's app for daily news and videos

Install App

ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿ ಕೊಲೆ!

Webdunia
ಮಂಗಳವಾರ, 9 ನವೆಂಬರ್ 2021 (11:33 IST)
ಬೆಂಗಳೂರು : ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ ಗಾರ್ಮೆಂಟ್ಸ್ ನೌಕರನನ್ನು ಹತ್ಯೆ ಮಾಡಿದ ಮಹಿಳೆಯ ಸಹೋದರ ಸೇರಿ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ಬಳಿಕ ಆರೋಪಿಗಳು ಆಟೋದಲ್ಲಿ ಶವದೊಂದಿಗೆ ಬಂದು ಠಾಣೆಗೆ ಶರಣಾಗಿದ್ದಾರೆ.
ಹೊಸೂರು ಮದನಪಲ್ಲಿ ನಿವಾಸಿ ಗಾರ್ಮೆಂಟ್ಸ್ ಕಾರ್ಖಾನೆ ನೌಕರ ಭಾಸ್ಕರ್ (31) ಕೊಲೆಯಾದ ವ್ಯಕ್ತಿ. ಮಹಿಳೆಯ ಸಹೋದರ ಮುನಿರಾಜು (28) ಹಾಗೂ ಸಹಚರರಾದ ಮಾರುತಿ (22), ನಾಗೇಶ್ (22), ಪ್ರಶಾಂತ್ (20) ಎಂಬವರನ್ನು ಬಂಧಿಸಲಾಗಿದೆ.
ಮುನಿರಾಜು ಸಹೋದರಿಯು ಪತಿ ಹಾಗೂ ಇಬ್ಬರು ಮಕ್ಕಳ ಜತೆಗೆ ಮಾಲೂರಿನಲ್ಲಿ ವಾಸಿಸುತ್ತಿದ್ದರು. ಹೊಸೂರು ಬಳಿಯ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮುನಿರಾಜು ಸಹೋದರಿ ಜತೆಗೆ ಭಾಸ್ಕರ್ ಸಲುಗೆ ಬೆಳೆಸಿಕೊಂಡಿದ್ದ. ಕಳೆದ 15 ದಿನಗಳ ಹಿಂದೆ ಇದೇ ವಿಚಾರಕ್ಕೆ ಪತಿಯೊಂದಿಗೆ ಜಗಳ ಮಾಡಿದ ಮಹಿಳೆ, ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ ಲೇಔಟ್ನಲ್ಲಿರುವ ತನ್ನ ತವರು ಮನೆಗೆ ಮಕ್ಕಳೊಂದಿಗೆ ಬಂದಿದ್ದಳು.
ಶನಿವಾರ ರಾತ್ರಿ ಭಾಸ್ಕರ್ ಮಹಿಳೆ ಮನೆಗೆ ಬಂದು ಬೇರೆ ಮನೆ ಮಾಡಿಕೊಡುವುದಾಗಿ ಭರವಸೆ ನೀಡಿ, ಆಕೆಯನ್ನು ಮಕ್ಕಳ ಜತೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದ. ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ಆಟೋದಿಂದಿಳಿದು, ಸೋದರ ಮಾವ ಮುನಿರಾಜುಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಮುನಿರಾಜು ತನ್ನ ಆಟೋದಲ್ಲಿಇತರ ಸ್ನೇಹಿತರನ್ನು ಕರೆದುಕೊಂಡು ಸುಂಕದಕಟ್ಟೆ ಬಳಿ ಸಹೋದರಿ ಮತ್ತು ಭಾಸ್ಕರ್ ಇದ್ದ ಆಟೋವನ್ನು ಅಡ್ಡಗಟ್ಟಿದ್ದ. ನಂತರ ಸಹೋದರಿಯನ್ನು ಮನೆಯಲ್ಲಿ ಬಿಟ್ಟು ಭಾಸ್ಕರ್ನನ್ನು ಕೆಬ್ಬೇ ಹಳ್ಳದ ಬಳಿಯ ನಿರ್ಜನ ಪ್ರದೇಶಕ್ಕೆ ಆಟೋದಲ್ಲಿ ಕರೆದೊಯ್ದು ಸಹಚರರ ಜತೆ ಸೇರಿ ಹಲ್ಲೆ ನಡೆಸಿದ್ದ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚುನಾವಣಾ ರಾಜಕಾರಣಕ್ಕೆ ಸೋಮಣ್ಣ ನಿವೃತ್ತಿ: ದೇವರೇ ಹೇಳಿದರೂ ಸ್ಪರ್ಧಿಸಲ್ಲ ಎಂದು ಕೇಂದ್ರ ಸಚಿವ

Karnataka Weather: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಏಲ್ಲೆಲ್ಲಿ ಮಳೆ ಸಾಧ್ಯತೆ ಇಲ್ಲಿದೆ ಮಾಹಿತಿ

ಟ್ರಾಫಿಕ್‌ ಫೈನ್‌ ಆಫರ್‌ಗೆ ರಾಜಧಾನಿಯಲ್ಲಿ ಭರ್ಜರಿ ರೆಸ್ಪಾನ್ಸ್‌: ಮೊದಲ ದಿನ ವಸೂಲಿಯಾದ ದಂಡವೆಷ್ಟು ಗೊತ್ತಾ

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ತೆರಳುತ್ತಿದ್ದ ಎಂಟು ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಬಲಿ

ಷರತ್ತುಬದ್ಧ ಜಾಮೀನು ಪಡೆದ ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಬಂಧನದ ಭೀತಿ

ಮುಂದಿನ ಸುದ್ದಿ
Show comments