Select Your Language

Notifications

webdunia
webdunia
webdunia
webdunia

ವಿಚಾರಣೆಗೆ ಹೆದರಿ ಒಂದೇ ಕುಟುಂಬದ ಐವರ ಆತ್ಮಹತ್ಯೆ!?

ವಿಚಾರಣೆಗೆ ಹೆದರಿ ಒಂದೇ ಕುಟುಂಬದ ಐವರ ಆತ್ಮಹತ್ಯೆ!?
ಕೋಲಾರ , ಮಂಗಳವಾರ, 9 ನವೆಂಬರ್ 2021 (08:50 IST)
ಕೋಲಾರ : ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದುರಂತ ಅಂತ್ಯ ಕಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ನಾಲ್ವರು ಮೃತಪಟ್ಟಿದ್ದಾರೆ.
ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ಪೊಲೀಸ್ ತನಿಖೆಗೆ ಹೆದರಿ ಮನೆಯಲ್ಲಿ ನಿನ್ನೆ ಸಂಜೆ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಕುಟುಂಬದ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಅರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಆರ್. ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಮುನಿಯಪ್ಪ(70), ಬಾಬು (45), ಗಂಗೋತ್ರಿ(17) ಹಾಗೂ ನಾರಾಯಣಮ್ಮ (65) ಮೃತಪಟ್ಟಿದ್ದಾರೆ.
ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುಷ್ಪಾ ಅವರು ಸ್ನೇಹಿತೆ ಗೀತಾ ಜೊತೆಗೂಡಿ, ಸತ್ಯ-ಸುಮಿತ್ರಾ ಎಂಬ ದಂಪತಿಯ 9 ದಿನದ ಗಂಡು ಮಗುವನ್ನ ಬೇರೊಬ್ಬರಿಗೆ ನೀಡುವುದಾಗಿ ಹೇಳಿ, ಮಾರಾಟ ಮಾಡಿದ್ದರು.
ಬಳಿಕ ನಮಗೆ ಮಗು ವಾಪಾಸ್ ಬೇಕೆಂದು ಸತ್ಯ , ಸುಮಿತ್ರ ದಂಪತಿ ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನೆನ್ನೆ ಪೊಲೀಸರು ವಿಚಾರಣೆ ನಡೆಸಿ ಮಗುವನ್ನು ವಾಪಾಸ್ ತಂದು ಕೊಡುವಂತೆ ಪುಷ್ಪ ಹಾಗೂ ಗೀತಾ ಎನ್ನುವರಿಗೆ ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದರು. ಮಾನಕ್ಕೆ ಅಂಜಿದ ಪುಷ್ಪ ಕುಟುಂಬದ ಎಲ್ಲರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೋಲಾರದ ಗಲ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ವಯಸ್ಸಿನ ಪತ್ನಿ ಕೊಂದು ಪರಾರಿ!