Webdunia - Bharat's app for daily news and videos

Install App

ಬಿಬಿಎಂಪಿಯ ಹೊಸ ಸ್ಮಾರ್ಟ್ ಪಾರ್ಕಿಂಗ್ ಪ್ಲಾನ್ ಗೆ ಆಕ್ಷೇಪ..!

Webdunia
ಸೋಮವಾರ, 16 ಅಕ್ಟೋಬರ್ 2023 (14:41 IST)
ವಾರ್ಷಿಕ 500 ಕೋಟಿ ಆದಾಯ ನಿರೀಕ್ಷೆಯಲ್ಲಿ ಪಾಲಿಕೆ ಮಹಾ ಪ್ಲಾನ್  ನಡೆಸಿದೆ.ಈಗಾಗಲೇ ನಗರದಲ್ಲಿ ಕೋಟಿಗೂ ಅಧಿಕ ವಾಹನಗಳಿರುವುದರಿಂದ ವಾಹನ ನಿಲುಗಡೆಗೆ ಹೊಸ ಮಾರ್ಗ ಪಾಲಿಕೆ ಕಂಡುಹಿಡಿದ್ದಿದೆ.ಪಾರ್ಕಿಂಗ್ ಪಾಲಿಸಿ ಎಂಬ ನೂತನ ನೀತಿ ಜಾರಿಯಲ್ಲಿ ಹಗಲು ದರೋಡೆ ಪಾಲಿಕೆ ಮಾಡಿದೆ.ಇತ್ತೀಚೆಗಷ್ಟೇ ಅನುಷ್ಟಾನಕ್ಕೆ ಬಂದಿದ್ದ ಸ್ಮಾರ್ಟ್ ಪಾರ್ಕಿಂಗ್ ನ್ನ ನಗರದಲ್ಲಿ ಎಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಲು ಪಾರ್ಕಿಂಗ್ ಜಾರಿಗೆ ತಂದಿತ್ತು.ಇದರಿಂದ ವಾರ್ಷಿಕ ಅಂದಾಜು 400 ರಿಂದ 500 ಕೋಟಿ ಆದಾಯ ದೊರಕಿರುವ ನಿರೀಕ್ಷೆ ಇದೆ.ನಗರದಲ್ಲಿ 35 ಲಕ್ಷ ಸ್ವತ್ತುಗಳ ಪೈಕಿ ಶೇ.80 ಕಟ್ಟಡಗಳಲ್ಲಿ ಪಾರ್ಕಿಂಗ್ ನಿಯಮ‌ ಪಾಲಿಸಿಲ್ಲ.ಪಾದಚಾರಿ ಮಾರ್ಗದಲ್ಲಿ ವಾಹನಗಳು ಆಶ್ರಯ ಪಡೆದು ನರಕ ಸದೃಶ ವಾತಾವರಣ ಸೃಷ್ಟಿಯಾಗಿದೆ.ಹೀಗಾಗಿ ಹೊಸ ಪಾರ್ಕಿಂಗ್ ವ್ಯವಸ್ಥೆಯ ಕಲ್ಪಿಸಲಾಗಿತ್ತು.ಪ್ರದೇಶವಾರು ಪ್ರತ್ಯೇಕ ವಾಹನ ನಿಲುಗಡೆ ಯೋಜನೆ ತಂದಿದ್ದುಅಸ್ತವ್ಯಸ್ತ ಪಾರ್ಕಿಂಗ್ ಬದಲಿಗೆ ವಾಹನಗಳ ಆಚ್ಚುಕಟ್ಟು ನಿಲುಗಡೆ,ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಪ್ರವೃತ್ತಿಗೆ ಕಡಿವಾಣ ಹಾಕಲಾಗಿದೆ.
 
ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದೆ.ಸಮೂಹ ಸಾರಿಗೆ ಪಾರ್ಕಿಂಗ್ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದೆ.ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೇನೆ ಪಾರ್ಕಿಂಗ್ ವಸುಲಿಗೆ ಗುತ್ತಿಗೆದಾರರು ಈಗ ಇಳಿದಿದ್ದು,ಒಂದೇ ಪಾರ್ಕಿಂಗ್ ಸ್ಥಳದಲ್ಲಿ ಎರಡು ಬೋರ್ಡ್ ಗಳು ಹಾಕಿ ಪಾರ್ಕಿಂಗ್ ವಸೂಲಿ  ಮಾಡಲಾಗ್ತಿದೆ.SLM ಮತ್ತು LRM ಕಂಪನಿ ಗುತ್ತಿಗೆ ದಾರರು ಬಿಬಿಎಂಪಿ ಹಗಲು ದರೋಡೆಗಿಳಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raghuwamshi murder: ಸೋನಂಗೆ ನನ್ನ ಮೇಲೆ ಇಂಟ್ರೆಸ್ಟೇ ಇಲ್ಲ ಎಂದಿದ್ದ ರಾಜ ರಘುವಂಶಿ

ಹಳೇ ಜಾತಿ ಸಮೀಕ್ಷೆಗೆ 187 ಕೋಟಿ ಖರ್ಚಾಯ್ತಲ್ಲಾ ಅಂದ್ರೆ ಅದೆಲ್ಲಾ ಪರ್ವಾಗಿಲ್ಲ ಎಂದ ಸತೀಶ್ ಜಾರಕಿಹೊಳಿ

E Tukaram: ಬಳ್ಳಾರಿ ಚುನಾವಣೆಗೆ ಬರೋಬ್ಬರಿ 21 ಕೋಟಿ ಹಣ ಬಳಕೆ: ಸಂಸದ ಇ ತುಕರಾಂ ಇಡಿ ವಶಕ್ಕೆ

Gold price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvamshi murder: ಗುಡ್ಡ ಹತ್ತಿ ಸುಸ್ತು ಎಂದಿದ್ದ ಹಂತಕರಿಗೆ ಸೋನಂ ನೀಡಿದ್ದ ಆಫರ್ ಏನು

ಮುಂದಿನ ಸುದ್ದಿ