Select Your Language

Notifications

webdunia
webdunia
webdunia
webdunia

ಡಿಸಿಎಂ ಡಿಕೆಶಿಗೆ ಮಾಜಿ ಡಿಸಿಎಂ ಡಿಚ್ಚಿ

ಡಿಸಿಎಂ ಡಿಕೆಶಿಗೆ ಮಾಜಿ ಡಿಸಿಎಂ ಡಿಚ್ಚಿ
bangalore , ಶನಿವಾರ, 14 ಅಕ್ಟೋಬರ್ 2023 (16:43 IST)
ಐಟಿ ದಾಳಿ ವಿಚಾರವಾಗಿ ಹಾದಿ ಬೀದೀಲ್ಲಿ ಹೋಗೋರಿಗೆಲ್ಲಾ ಹೇಳಕ್ಕಾಗಲ್ಲ ಎಂದ ಡಿಕೆಶಿ ಹೇಳಿಕೆ ವಿಚಾರವಾಗಿ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
 
ಡಿಕೆಶಿ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ತಾರೆ.ಹಾದಿ ಬೀದಿಯಲ್ಲಿ ಇರೋರಿಗೆ ಉತ್ತರ ಕೊಡೋದು ಬೇಡಪ್ಪ, ಜನರಿಗೆ ಉತ್ತರ ಕೊಡಪ್ಪ.40% ಕಮೀಷನ್ ಅಂತ ಹೇಳಿ ಆರೋಪ ಮಾಡಿದವನ ಮನೆಯಲ್ಲೇ 42 ಕೋಟಿ ಹಣ ಸಿಕ್ಕಿದೆ.40% ಕಮಿಷನ್ ತನಿಖೆ ಮಾಡೋದಕ್ಕೆ ಕಮೀಷನ್ ನೇಮಕ ಮಾಡಿದವರು ಇವರು,ರಾಜಕೀಯ ಮಾಡ್ತಿದ್ದಾರೆ ಅಂತ ಹೇಳುವ ನೀವು ಇನ್ನೆಂತವರು.?ಜವಾಬ್ದಾರಿ ಇದ್ದವರು ಹೇಳುವ ಮಾತಾ ಇದು.?ಇವರ ಆಲೋಚನೆ ಹೇಗಿದೆ ನೋಡಿ.ಅನ್ ಅಕೌಂಟ್ ಆಗಿ ಸಿಕ್ಕಿರೋದನ್ನ ಇವರು ವಿರೋಧಿಸಬೇಕು.ಅದನ್ನ ಬಿಟ್ಟು ರಾಜಕೀಯ ಪ್ರೇರಿತ ಅಂತ ಹೇಳೋದು ಎಷ್ಟು ಸರಿ.?ಇವನ ಆದಾಯ ಏನು, ಹೇಗೆ ಬಂತು ಅಂತ ತನಿಖೆ ಮಾಡಬೇಕು.ಈತನ ಆದಾಯ ಗುಟ್ಟು ಕೇಳಬೇಕು .ಡಿಕೆಶಿ ಅವರಿಗೆ ಅದಕ್ಕೆ ಹೇಳಿದ್ದು ಒಂದು ಯೂನಿವರ್ಸಿಟಿ ಮಾಡಿ ಅಂತ.ದುಡ್ಡು ಮಾಡೋದು ಹೇಗೆ ಅಂತ ಯೂನಿವರ್ಸಿಟಿ ಮಾಡಿ ಡಿಕೆಶಿ ಅವರೆ,ಡಿಕೆಶಿ ಯೂನಿವರ್ಸಿಟಿ, ಅಂಬಿಕಾಪತಿ ಯೂನಿವರ್ಸಿಟಿ, ಸಿದ್ದರಾಮಯ್ಯ ಯೂನಿವರ್ಸಿಟಿ, ಪ್ರಿಯಾಂಕ್ ಖರ್ಗೆ ಯೂನಿವರ್ಸಿಟಿ, ಜಮೀರ್ ಯೂನಿವರ್ಸಿಟಿ ಅಂತ ಮಾಡಿ.ಎಲ್ಲರಿಗೂ ದುಡ್ಡು ಮಾಡುವುದನ್ನ ಕಲಿಸಿಕೊಡಿ ಎಂದು ಡಿಸಿಎಂ ಡಿಕೆಶಿವಕುಮಾರ್  ವಿರುದ್ಧ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀರಾವರಿ ಯೋಜನೆ ಮರುಪರಿಶೀಲನೆಗೆ ನಿರ್ಧಾರ-ಸಿದ್ದರಾಮಯ್ಯ